101% true On Apr 13, 2018 11:55 AM, "Sameera samee" <mehak.sa...@gmail.com> wrote:
> *ಓದಲೇಬೇಕು* > (ನಂಗಂತೂ ಇಷ್ಟ ಆಯಿತು) > > ಗುರುಗಳು ಮನೆಗೆ ಬಂದಿದ್ದರು. > ಮನೆಯಲ್ಲಿ ಸಿರಿಧಾನ್ಯದ ಉಪ್ಪಿಟ್ಟು ಮಾಡಿದ್ದೆವು. > ಎರಡನೇ ತುತ್ತು ಬಾಯಿಗಿಡುತ್ತಿದ್ದಂತೆ ಗುರುಗಳು *ಇದಾವ ಧಾನ್ಯ* ಎಂದು ಕೇಳಿದರು. > *ಮಿಲ್ಲೆಟ್ಸ್. ಇದು 'ಸಾಮೆ'* ಅಂದೆ. > *ಇದನ್ನೇಕೆ ತಿನ್ನುತ್ತಿದ್ದೀಯ* ಎಂದು ಕೇಳಿದರು. > *ಆರೋಗ್ಯಕ್ಕೆ ಒಳ್ಳೆಯದಂತೆ, ತೆಳ್ಳಗಾಗುತ್ತಾರಂತೆ, ರಕ್ತದೊತ್ತಡ ಕಡಿಮೆ ಆಗುತ್ತದಂತೆ* > ಅಂದೆ. > ಗುರುಗಳು ನಕ್ಕರು. > *ನಿಮ್ಮ ಮನೆಯ ಹಿರಿಯರ ಫೋಟೋ ಇದೆಯಾ* ಅಂತ ಕೇಳಿದರು. > ನಮ್ಮ ಕುಟುಂಬದ ಹಿರಿಯರ ಫೋಟೋ ಕೊಟ್ಟೆ. > *ಇದಕ್ಕೂ ಹಳೆಯ ತಲೆಮಾರಿನ ಫೋಟೋ ಇದ್ದರೆ ಕೊಡು* ಅಂದರು. > ನಮ್ಮಪ್ಪ, ದೊಡ್ಡಪ್ಪ, ಚಿಕ್ಕಪ್ಪಂದಿರ ಫೋಟೋ ಕೊಟ್ಟೆ. > > ಅದನ್ನೇ ದಿಟ್ಟಿಸುತ್ತಾ ಗುರುಗಳು ಹೇಳಿದರು, > *ಇವರೆಲ್ಲ ತೆಳ್ಳಗೇ ಇದ್ದಾರಲ್ಲ! ಇವರು ಸಾಮೆ ತಿನ್ನುತ್ತಿದ್ದರೇ?* > > *ಇವರಿಗಿಂತ ಹಿರಿಯರೂ ತೆಳ್ಳಗೇ ಇದ್ದಿರಬೇಕು. ಅವರೂ ಸಿರಿಧಾನ್ಯ ತಿನ್ನುತ್ತಿರಲಿಲ್ಲ > ಅಲ್ಲವೇ?* > *ಈ ಜಗತ್ತಿನಲ್ಲಿ ಕೇವಲ ಐದು ವರ್ಷಗಳ ಹಿಂದೆ ಯಾರೂ ಸಿರಿಧಾನ್ಯ ತಿನ್ನುತ್ತಿರಲಿಲ್ಲ.* > > *ಇಪ್ಪತ್ತು ವರ್ಷಗಳ ಹಿಂದೆ ಎಲ್ಲರೂ ತೆಳ್ಳಗೇ ಇದ್ದರು. ಆರೋಗ್ಯವಂತರಾಗಿಯೂ ಇದ್ದರು. > ಅಲ್ಲವೇ?* ಎಂದರು. > ತಲೆಯಾಡಿಸಿದೆ. > > ಗುರುಗಳು ನಗುತ್ತಾ ಹೇಳಿದರು *ಅಂದರೆ ನಿನ್ನ ಅತಿ ತೂಕದ ಸಮಸ್ಯೆಗೆ ಕಾರಣ ಅನ್ನ ಅಲ್ಲ. > ನಿನ್ನ ಜೀವನ ವಿಧಾನ. ನಿಮ್ಮಪ್ಪ ದುಡೀತಿದ್ದರು. ನಿನ್ನ ತಾತ ನಡೀತಿದ್ದರು. > ಓಡಾಡುತ್ತಿದ್ದರು. ಬೆವರುತ್ತಿದ್ದರು. ದೇಹವನ್ನು ದಂಡಿಸುತ್ತಿದ್ದರು. ಶ್ರಮ > ಪಡುತ್ತಿದ್ದರು. ನಿಮ್ಮ ಮನೆಯಿಂದ ಮತ್ತೊಂದು ಮನೆಗೆ ಹೋಗುವುದಕ್ಕೆ ಬೈಕು > ಹತ್ತುತ್ತಿರಲಿಲ್ಲ. ಯಾವತ್ತೂ ಇಡೀ ದಿನ ಕೂತುಕೊಂಡೇ ಕಾಲ ಕಳೆಯುತ್ತಿರಲಿಲ್ಲ. ತಲೆ ಬಗ್ಗಿಸಿ > ಮೊಬೈಲ್ ನೋಡುತ್ತಾ ಬದುಕು ದಿನ ಸವೆಸುತ್ತಿರಲಿಲ್ಲ. Chips ತಿನ್ನುತ್ತಾ ಕ್ರಿಕೆಟ್ > ನೋಡುತ್ತಿರಲಿಲ್ಲ. ಆಟ ಆಡುತ್ತಿದ್ದರು. ಮೂಟೆ ಹೊರುತ್ತಿದ್ದರು. ನೀರು ಸೇದುತ್ತಿದ್ದರು. > ಹೌದಾ?* > ತಲೆಯಾಡಿಸಿದೆ. > > *ಅಂದರೆ ನೀನು ಬದಲಾಯಿಸಬೇಕಾದದ್ದು ನಿನ್ನ ಆಹಾರವನ್ನಲ್ಲ. ಜೀವನ ಶೈಲಿಯನ್ನು. ನಾನು > ಪಂಜಾಬಿನುದ್ದಗಲ ಓಡಾಡಿದ್ದೇನೆ. ಅಲ್ಲಿ ನೂರು ನೂರೈವತ್ತು ಕೇಜಿ ತೂಗುವ ಮಂದಿ ಸಾಕಷ್ಟು > ಮಂದಿ ಇದ್ದಾರೆ. ಅವರು ಗೋಧಿ ತಿನ್ನುವವರು. ಆದರೂ ಬೊಜ್ಜು ಬೆಳೆಸಿಕೊಂಡಿದ್ದಾರೆ. ಅಂದರೆ > ಬೊಜ್ಜು ಇಳಿಸುವುದಕ್ಕೆ ಗೋಧಿ ತಿಂದು ಪ್ರಯೋಜನ ಇಲ್ಲ. ಸಣ್ಣಗಾಗುವುದಕ್ಕೆ ಸಿರಿಧಾನ್ಯ > ತಿಂದು ಪ್ರಯೋಜನ ಇಲ್ಲ. ಸಿರಿಧಾನ್ಯವನ್ನು ಒಂದು ಗಂಟೆ ನೀರಲ್ಲಿ ನೆನೆಸಿಟ್ಟು ನೋಡು. ಅದು > ನೆನೆಯುವುದಿಲ್ಲ. ನೀರನ್ನು ಹೀರುವುದಿಲ್ಲ. ಒಂದು ಪಾವು ಅಕ್ಕಿ ಅನ್ನ ಆಗಬೇಕಿದ್ದರೆ > ಎರಡೂವರೆ ಪಾವು ನೀರು ಬೇಕು. ಸಿರಿಧಾನ್ಯ ಅದರ ಅರ್ಧದಷ್ಟು ನೀರಲ್ಲಿ ಬೇಯುತ್ತದೆ. ನೀರು > ಹೀರಿಕೊಳ್ಳದ ಧಾನ್ಯ ಒಳ್ಳೆಯದಲ್ಲ. ಒಂದು ವರ್ಷ ಸಿರಿಧಾನ್ಯವನ್ನೇ ತಿಂದು ನೋಡು. ಥೈರಾಯ್ಡ್ > ಗ್ರಂಥಿ ಇನ್ನಿಲ್ಲದಂತೆ ಏನೇನನ್ನೋ ಸ್ರವಿಸಲು ಶುರುಮಾಡುತ್ತದೆ.* > *ಹೋಗಲಿ, ಸಿರಿಧಾನ್ಯ ನೀರಿಲ್ಲದ ಪ್ರದೇಶದಲ್ಲೂ ಬೆಳೆಯಬಲ್ಲ, ಅತಿ ಕಡಿಮೆ ಖರ್ಚಲ್ಲಿ > ಬೆಳೆಯುವಂಥ ಧಾನ್ಯ. ಅದಕ್ಕೆ ಅಕ್ಕಿಯ ಮೂರು ಪಟ್ಟು ಬೆಲೆ ಯಾಕಿದೆ ಹಾಗಿದ್ದರೆ?* > *ಅಕ್ಕಿಯೊಳಗನ್ನವನು ಮೊದಲು ಕಂಡ ಜ್ಞಾನಿ, ಸಿರಿಧಾನ್ಯವನ್ನೇಕೆ ನಮ್ಮ major staple food > ಅಂತ ನಿರ್ಧರಿಸಲಿಲ್ಲ? ಯಾಕೆಂದರೆ ಅದು ಆರೋಗ್ಯವಂತ ಆಹಾರ ಅಲ್ಲವೇ ಅಲ್ಲ. ಅದನ್ನು ಈಗ > ಮಾರ್ಕೆಟಿಂಗ್ ಸಂಸ್ಥೆಗಳೂ ವೈದ್ಯರೂ ಸೇರಿ promote ಮಾಡುತ್ತಿದ್ದಾರೆ. ನಾವು ನಮ್ಮ > ಸುತ್ತಮುತ್ತ ಏನು ಬೆಳೆಯುತ್ತೇವೋ ಅದೇ ನಮಗೆ ಶ್ರೇಷ್ಠವಾದ ಆಹಾರ* > *ಆಹಾರ ಪದ್ದತಿ ಬದಲಾಯಿಸಬೇಡ, ಜೀವನ ಶೈಲಿ ಬದಲಾಯಿಸು. ಎಲ್ಲವೂ ಬದಲಾಗುತ್ತದೆ.* > *ಕುಂತಲ್ಲೇ ಕೂತು, ಕೈ ಕಾಲುಗಳನ್ನು ಮೈಯನ್ನು ಹೇಗೆ ಬಳಸಬೇಕೋ ಹಾಗೆ ಬಳಸದೇ, ಆ ಕೊರತೆ > ನೀಗಿಕೊಳ್ಳಲು ಸಿರಿಧಾನ್ಯ ತಿನ್ನುತ್ತೇನೆ ಅನ್ನೋದು ಪರಮ ದಡ್ಡತನ* ಅಂದರು. > > ಆವತ್ತೇ ರಾತ್ರಿ ಬಿಸಿಬಿಸಿ ಅನ್ನಕ್ಕೆ ಘಮಘಮಿಸುವ ಸಾರು, ಒಂದು ಮಿಳ್ಳೆ ತುಪ್ಪ ಹಾಕಿಕೊಂಡು > ಹೊಟ್ಟೆ ತುಂಬ ತಿಂದೆ. > ಸಿರಿಧಾನ್ಯಕ್ಕೆ ಹುಚ್ಚಿಗೆ ಬಲಿಯಾಗುತ್ತಿದ್ದವನನ್ನು ಗುರುಗಳು ಬಂದು ಕಾಪಾಡಿದರು. > > *ಹೌದು, ಬದಲಾಸಬೇಕಾದದು ಜೀವನಶೈಲಿನ್ನು, ಆಹಾರ ಪದ್ದತಿಯನ್ನಲ್ಲ* > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.