Useful information. On 26 Aug 2016 6:44 am, "HAREESHKUMAR K Agasanapura" <harihusk...@gmail.com> wrote:
> http://m.prajavani.net/article/2016_08_25/433460 > *ಕೋಣೆಗೆ ಬಂದಿರುವ ಆನೆ ಕಾಣದೇಕೆ?* > > 25 Aug, 2016 > > ನಾಗೇಶ್ ಹೆಗಡೆ > > <https://www.facebook.com/sharer/sharer.php?u=http%3A%2F%2Fgoo.gl%2FV4jZBK> > <https://twitter.com/intent/tweet?text=%E0%B2%95%E0%B3%8B%E0%B2%A3%E0%B3%86%E0%B2%97%E0%B3%86+%E0%B2%AC%E0%B2%82%E0%B2%A6%E0%B2%BF%E0%B2%B0%E0%B3%81%E0%B2%B5+%E0%B2%86%E0%B2%A8%E0%B3%86+%E0%B2%95%E0%B2%BE%E0%B2%A3%E0%B2%A6%E0%B3%87%E0%B2%95%E0%B3%86%3F+http%3A%2F%2Fgoo.gl%2FV4jZBK> > <https://plus.google.com/share?url=http%3A%2F%2Fgoo.gl%2FV4jZBK> > <http://www.pinterest.com/pin/find/?url=http%3A%2F%2Fgoo.gl%2FV4jZBK> > <http://www.linkedin.com/shareArticle?mini=true&title=%E0%B2%95%E0%B3%8B%E0%B2%A3%E0%B3%86%E0%B2%97%E0%B3%86+%E0%B2%AC%E0%B2%82%E0%B2%A6%E0%B2%BF%E0%B2%B0%E0%B3%81%E0%B2%B5+%E0%B2%86%E0%B2%A8%E0%B3%86+%E0%B2%95%E0%B2%BE%E0%B2%A3%E0%B2%A6%E0%B3%87%E0%B2%95%E0%B3%86%3F+&url=http%3A%2F%2Fgoo.gl%2FV4jZBK> > > ನಮ್ಮ ದೇಶದ ಯಾವುದಾದರೂ ಒಬ್ಬ ಪ್ರಖ್ಯಾತ ರಾಕೆಟ್ ವಿಜ್ಞಾನಿಯ ಹೆಸರನ್ನು ಹೇಳಬಲ್ಲಿರಾ? > ಮಕ್ಕಳಿಗೆ ಈ ಪ್ರಶ್ನೆಯನ್ನು ಕೇಳಿದರೆ ಪಟಪಟನೆ ಹತ್ತಾರು ಸರಿ ಉತ್ತರಗಳು ಬರುತ್ತವೆ. ನಮ್ಮ > ದೇಶದ ಪ್ರಸಿದ್ಧ ಪರಮಾಣು ವಿಜ್ಞಾನಿಯ ಹೆಸರು ಗೊತ್ತಿದೆಯೆ? ಅದಕ್ಕೂ ಪಟಪಟನೆ ನಾಲ್ಕಾರು ಸರಿ > ಉತ್ತರಗಳು ಬರುತ್ತವೆ. > > ಬಹಳಷ್ಟು ಬಾರಿ ಆ ಪ್ರಶ್ನೆಯ ಉತ್ತರವೇ ಈ ಪ್ರಶ್ನೆಯ ಉತ್ತರವೂ ಆಗಿರುತ್ತದೆ. ಹಾಗಿದ್ದರೆ, > ನಮ್ಮ ದೇಶದ ಪ್ರಸಿದ್ಧ ಹವಾಮಾನ ವಿಜ್ಞಾನಿಯ ಹೆಸರನ್ನು ಹೇಳಬಲ್ಲಿರಾ?.... ಈಗ ಎಲ್ಲೆಡೆ ಮೌನ > ಆವರಿಸುತ್ತದೆ. ತಪ್ಪು ಉತ್ತರ ಕೊಡಲಿಕ್ಕೂ ಮಕ್ಕಳಿಗೆ ಒಂದು ಹೆಸರು ಹೊಳೆಯುವುದಿಲ್ಲ. > > ನಮ್ಮ ದೇಶದ ಕ್ರೀಡಾರಂಗಕ್ಕೂ ವಿಜ್ಞಾನರಂಗಕ್ಕೂ ತುಂಬ ಹೋಲಿಕೆಗಳಿವೆ. ಒಲಿಂಪಿಕ್ಸ್ ಪದಕ > ಪಡೆಯುವಲ್ಲಿ ನಮ್ಮ ಸ್ಥಾನಮಾನ ಎಷ್ಟಿದೆಯೊ ಅಷ್ಟೇ ಕಳಪೆಯ ಸ್ಥಾನಮಾನ ವಿಜ್ಞಾನದ ನೊಬೆಲ್ ಪದಕ > ಪಡೆಯುವಲ್ಲಿಯೂ ಇದೆ. > > ಕ್ರೀಡಾರಂಗದಲ್ಲಿ ಕ್ರಿಕೆಟ್, ಟೆನ್ನಿಸ್ಗಳಿಗೆ ಇನ್ನಿಲ್ಲದ ಮಾನ್ಯತೆ, ಪ್ರಭಾವಳಿ ಇದೆ. > ಆದರೆ ತೀರ ಸಾಮಾನ್ಯ ಶಾಲಾ ಮಕ್ಕಳ ಕೈಗೆಟುಕಬಹುದಾದ ಓಟ, ಜಿಗಿದಾಟ (ಜಿಮ್ನಾಸ್ಟಿಕ್)ಗಳಿಗೆ > ಮಾನ್ಯತೆ ಇಲ್ಲ. ವಿಜ್ಞಾನದಲ್ಲೂ ಅಷ್ಟೆ: ಪರಮಾಣು ವಿಜ್ಞಾನಕ್ಕೆ, ಕ್ಷಿಪಣಿ > ತಂತ್ರಜ್ಞಾನಕ್ಕೆ ಸಿಗುವ ಮಾನ್ಯತೆ ಹವಾಮಾನ ವಿಜ್ಞಾನಕ್ಕೆ ಇಲ್ಲ. ಹವಾಮಾನ ಅಧ್ಯಯನಕ್ಕೆ > ಬೇಕಾದ ಸಲಕರಣೆಗಳನ್ನು ಶಾಲಾ ಮಕ್ಕಳೇ ಹೊಂದಿಸಿಕೊಳ್ಳಬಹುದು, ಅಥವಾ ಅಲ್ಪವೆಚ್ಚದಲ್ಲಿ > ಖರೀದಿಸಿ ತರಬಹುದು. ಆದರೆ ಅದರ ಮಹತ್ವವನ್ನು ಗ್ರಹಿಸಲು ಬೇಕಾದ ಅಆಇಈ ತರಬೇತಿ ಕೂಡ ನಮ್ಮ > ಶಿಕ್ಷಕರಿಗೆ ಇಲ್ಲ. > > ಹವಾಮಾನ ದಿನದಿನಕ್ಕೆ ಕ್ರೂರವಾಗುತ್ತಿದೆ. ಬರ- ನೆರೆ ಎಂಬಂಥ ಕನಿಷ್ಠ ಗರಿಷ್ಠಗಳ ಅಂಚಿನ > ಹೊಯ್ದಾಟವೇ ನಿತ್ಯದ ಸುದ್ದಿಯಾಗುತ್ತಿದೆ. ದಾಖಲೆಗಳ ಪ್ರಕಾರ ಕಳೆದ ಜುಲೈ ತಿಂಗಳಲ್ಲಿ > ಜಾಗತಿಕ ಸರಾಸರಿ ಉಷ್ಣತೆ ಹಿಂದಿನ ಎಲ್ಲ ಜುಲೈ ತಿಂಗಳ ದಾಖಲೆಗಳನ್ನೂ ಮೆಟ್ಟಿ ನಿಂತಿದೆ. > ಎಲ್ಲ ಜುಲೈಗಳಷ್ಟೇ ಅಲ್ಲ, ನಾಸಾ ವರದಿಯ ಪ್ರಕಾರ, 1880ರಿಂದ ಭೂಮಿಯ ತಾಪಮಾನದ ದಾಖಲೆ ಇಡುವ > ಪ್ರಕ್ರಿಯೆ ಆರಂಭವಾದಾಗಿನಿಂದ ಭೂತಾಪ ಇಷ್ಟು ಏರಿಕೆ ಆಗಿದ್ದು ಇದೇ ಮೊದಲು. ಈ ಏರಿಕೆ > ಹಠಾತ್ತಾಗಿ ಆಗಿದ್ದೇನೂ ಇಲ್ಲ. > > ಕಳೆದ ಒಂದು ತಲೆಮಾರಿನಿಂದ ಆಗುತ್ತಲೇ ಇದೆ. ಹಿಂದಿನ 14 ವರ್ಷಗಳಲ್ಲಿ ಒಟ್ಟೂ 12 ವರ್ಷ > ಅತ್ಯಧಿಕ ಉಷ್ಣತೆಯ ವರ್ಷಗಳೇ ಆಗಿದ್ದವು. ಬುಂದೇಲಖಂಡದಲ್ಲಿ ಸತತ ಮೂರು ಬರವರ್ಷಗಳಿಂದಾಗಿ > ಶ್ರಮಜೀವಿಗಳು ನಿರಾಶ್ರಿತರಾಗಿ ದಿಲ್ಲಿಯ ಮೇಲುಸೇತುವೆಗಳ ಕೆಳಗೆ, ಕೊಳಕು ಕೊಳ್ಳಗಳ ಅಂಚಿಗೆ > ಸಂತೆ ನೆರೆದಿದ್ದಾರೆ. > > ನೀರಿನ ರೈಲಿಗಾಗಿ ಕಾದುನಿಂತ ಮರಾಠಾವಾಡಾದ ಜನರ ಸ್ಥಿತಿಯಂತೂ ಗೊತ್ತೇ ಇದೆ. > ಛತ್ತೀಸಗಢದಲ್ಲಿ ಅರಣ್ಯಗಳ ಮಧ್ಯೆ ಬರಗಾಲ ಬಂದಿದೆ. ಅಲ್ಲಿ ಜೇನು ಮತ್ತು ಮಹುವಾ ಇಳುವರಿ > ಕುಸಿದಿದ್ದರಿಂದ ಕೋಟಿಗಟ್ಟಲೆ ಆದಿವಾಸಿಗಳು ತತ್ತರಿಸಿದ್ದಾರೆ. ಇದೀಗ ಉತ್ತರ ಭಾರತದಲ್ಲಿ > ಗಂಗೆ, ಯಮುನೆ, ಸೋನ್ ನದಿಗಳು ಧ್ವಂಸಧಾರೆಯನ್ನೇ ಹರಿಸುತ್ತಿವೆ. > > ಬಿಹಾರದಲ್ಲಿ ಎಂದಿಗಿಂತ ಕಡಿಮೆ ಮಳೆಯಾದರೂ ಏಳು ನದಿಗಳ ನೆರೆ ಹಾವಳಿಯಿಂದ ಜನಸ್ತೋಮ > ನಲುಗುತ್ತಿದೆ. ಕರ್ನಾಟಕದಲ್ಲಿ 74 ತಾಲ್ಲೂಕುಗಳಲ್ಲಿ ಬರ ಸಿಡಿಲಿನಂತೆ ಎರಗಿದೆ. ಆಲಮಟ್ಟಿ > ತುಂಬಿದ್ದರೂ 50 ಕಿ.ಮೀ ಆಚೆ ರೈತರ ಸೇಂಗಾ ಬೆಳೆ ಒಣಗುತ್ತಿದೆ. ಚೆನ್ನೈಯಲ್ಲಿ ನೆರೆ ಹಾವಳಿಯ > ಮಧ್ಯೆ ನಿಂತ ಜಯಲಲಿತಾ ಕಾವೇರಿಯ ನೀರು ಬೇಕೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ > ಇಡುತ್ತಿದ್ದಾರೆ. > > ನಮ್ಮೆಲ್ಲರ ನೆಮ್ಮದಿಯನ್ನು ಹಿಂಡಿ ಹಿಪ್ಪೆ ಮಾಡಿ ಎಸೆಯಬಲ್ಲ ಈ ಹವಾಮಾನ ವಿದ್ಯಮಾನ ನಮ್ಮ > ಸಾಹಿತಿಗಳಿಗೆ, ಕಲಾವಿದರಿಗೆ, ಸಿನೆಮಾ ಮಂದಿಗೆ, ಚಿಂತಕರಿಗೆ, ಧಾರ್ಮಿಕ ಮುಖಂಡರಿಗೆ, > ಶಿಕ್ಷಣತಜ್ಞರಿಗೆ, ಯೋಜನಾ ಧುರಂಧರರಿಗೆ ಕಾಣುತ್ತಿಲ್ಲ ಏಕೆ? ವಿಶೇಷವಾಗಿ ನಿನ್ನೆ ಮತ್ತು > ನಾಳೆಗಳನ್ನು ಗ್ರಹಿಸಿ, ಮಥಿಸಿ ಸಮಾಜಕ್ಕೆ ದಾರಿದೀಪವಾಗಬಲ್ಲ (ರವಿ ಕಾಣದ್ದನ್ನೂ ಕಾಣುವ) > ಕವಿಗಳು, ಸಾಹಿತಿಗಳು ಯಾಕೆ ಇದನ್ನು ಗ್ರಹಿಸುತ್ತಿಲ್ಲ? > > ಈ ಪ್ರಶ್ನೆಯನ್ನು ಕೇಳಿದವರು ಭಾರತದ ಪ್ರಖ್ಯಾತ ಇಂಗ್ಲಿಷ್ ಕಾದಂಬರಿಕಾರ ಅಮಿತಾವ್ ಘೋಷ್. > ಅವರು ಈಚೆಗಷ್ಟೆ ಬರೆದ ‘ದಿ ಗ್ರೇಟ್ ಡಿರೇಂಜ್ಮೆಂಟ್- ಕ್ಲೈಮೇಟ್ ಚೇಂಜ್ ಅಂಡ್ ದಿ > ಅನ್ಥಿಂಕಬಲ್’ ಹೆಸರಿನ ಗ್ರಂಥ ಈಗ ಸಾಕಷ್ಟು ಶ್ಲಾಘನೆಗೆ, ಚರ್ಚೆಗೆ ಗ್ರಾಸವಾಗುತ್ತಿದೆ > (ಡಿರೇಂಜ್ಮೆಂಟ್ ಅಂದರೆ ಅಸ್ತವ್ಯಸ್ತ, ಕ್ರಮಭಂಗ, ಅಲ್ಲೋಲಕಲ್ಲೋಲ). > > ಈಗ ಕಾಣುತ್ತಿರುವ ವ್ಯಾಪಕ ಹವಾಗುಣ ಬದಲಾವಣೆ ನಮ್ಮ ಭೂಗೋಲ, ಸಂಸ್ಕೃತಿ, ವಾಣಿಜ್ಯಗಳಿಗಷ್ಟೇ > ಅಲ್ಲ, ಸ್ವಾತಂತ್ರ್ಯದ ಪರಿಕಲ್ಪನೆಗೇ ಸವಾಲು ಹಾಕುತ್ತಿದೆ; ಇಡೀ ಮನುಕುಲವೇ ಹೇಗೆ ಹೊಸದೊಂದು > ಪ್ರಪಾತದ ಅಂಚಿನಲ್ಲಿ ತೊನೆದಾಡುತ್ತಿದೆ ಎಂಬುದರ ಒಳನೋಟ ಈ ಕೃತಿಯಲ್ಲಿದೆ. ಆಕ್ಸ್ಫರ್ಡ್, > ಅಲೆಕ್ಸಾಂಡ್ರಿಯಾಗಳಲ್ಲಿ ಓದಿದ ಅಮಿತಾವ್ ಘೋಷ್ ತಮ್ಮ ‘ದ ಹಂಗ್ರಿ ಟೈಡ್’, ‘ಫ್ಲಡ್ ಆಫ್ > ಫಾಯರ್’, ‘ರಿವರ್ ಆಫ್ ಸ್ಮೋಕ್’, ‘ದ ಗ್ಲಾಸ್ ಪ್ಯಾಲೇಸ್’ ಮುಂತಾದ ಕಾದಂಬರಿಗಳಿಗೆ ಅನೇಕ > ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದವರು. > > ವಿಜ್ಞಾನದ ಸಾಮಾಜಿಕ ಮುಖಗಳನ್ನು ತಮ್ಮ ಕಾದಂಬರಿಗಳಲ್ಲಿ ಸಾಕಷ್ಟು ಅನಾವರಣ ಮಾಡಿದ ಇವರು > (ತಮ್ಮ ‘ಕಲ್ಕತ್ತಾ ಕ್ರೊಮೊಸೋಮ್’ ವೈಜ್ಞಾನಿಕ ಕಾದಂಬರಿಗೆ ಆರ್ಥರ್ ಸಿ.ಕ್ಲಾರ್ಕ್ > ಪ್ರಶಸ್ತಿಯನ್ನು ಪಡೆದಿದ್ದಾರೆ) ಈಗಿನ ಬಿಸಿಪ್ರಳಯ, ಅದರಿಂದಾಗುತ್ತಿರುವ ಅಂತರರಾಷ್ಟ್ರೀಯ > ಬಿಕ್ಕಟ್ಟು, ಪ್ಯಾರಿಸ್ ಒಪ್ಪಂದ ಮುಂತಾದ ವಿಷಯಗಳ ಮೇಲೆ ಪ್ರಬುದ್ಧ ಚಿಂತನೆ ಮಾಡುತ್ತಾರೆ. > > ಅವರ ‘ಡಿರೇಂಜ್ಮೆಂಟ್’ ಕೃತಿ ಹೊರಬಂದ ನಂತರ ಅನೇಕ ಇಂಗ್ಲಿಷ್ ಪತ್ರಿಕೆಗಳಲ್ಲಿ, > ಚಾನೆಲ್ಗಳಲ್ಲಿ ಅವರ ಸಂದರ್ಶನ ನಡೆಯುತ್ತಿದೆ. ಕೆಲವನ್ನು ಯೂಟ್ಯೂಬ್ನಲ್ಲ್ಲೂ ನೋಡಬಹುದು. > ವಿಜ್ಞಾನ ಮತ್ತು ಪರಿಸರ ಕುರಿತ ‘ಡೌನ್ ಟು ಅರ್ಥ್’ ಪಾಕ್ಷಿಕ ಈಚಿನ ಸಂಚಿಕೆಯಲ್ಲಿ ಅವರ > ಕೃತಿಯ ಸಾರಾಂಶ ಮತ್ತು ಸಂದರ್ಶನವನ್ನು ಆದ್ಯತೆಯ ವಿಷಯವಾಗಿ ಪ್ರಕಟಿಸಿದೆ. ಮುಂದಿನ ಕೆಲವು > ಪರಿಚ್ಛೇದಗಳು ಅವರ ದೃಷ್ಟಿಕೋನವನ್ನು ಧ್ವನಿಸುತ್ತವೆ: > > ಈಗಿನ ಈ ಸಂಕಷ್ಟಗಳಿಗೆ ಮೂಲ ಕಾರಣ ಎನಿಸಿದ ಕಾರ್ಬನ್ ಹಿಂದೆಲ್ಲ ಅಸಲೀ ಸಂಪತ್ತೆನಿಸಿತ್ತು. > ಯಾರು ಜಾಸ್ತಿ ಕಾರ್ಬನ್ನಿನ (ಅಂದರೆ ಕಲ್ಲಿದ್ದಲು, ಪೆಟ್ರೋಲು) ಯಜಮಾನಿಕೆ ಪಡೆಯುತ್ತಾರೊ > ಅವರೇ ಶ್ರೀಮಂತರೆನ್ನಿಸಿದರು. ಅಂಥ ದೇಶವೇ ಧನಿಕ ದೇಶವೆನ್ನಿಸಿತ್ತು. ಹಾಗಾಗಿ ಈಗಿನ ಎಲ್ಲ > ಸುಧಾರಿತ ದೇಶಗಳ ಆರ್ಥಿಕತೆಯೂ ಕಾರ್ಬನ್ನನ್ನೇ ಅವಲಂಬಿಸಿದೆ. ಭೂಮಿ ಬಿಸಿಯಾಗುತ್ತಿದೆ ಎಂಬ > ಕಾರಣಕ್ಕೆ ಕಾರ್ಬನ್ ಆರ್ಥಿಕತೆಯನ್ನು ಕೊಡವಿ ಹಾಕುವುದು ಸುಲಭವಲ್ಲ. > > ಎರಡನೆಯದಾಗಿ, ಆ ಕಾರ್ಬನ್ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಬೇಕೆಂದರೆ ಹೆಚ್ಚು ಹೆಚ್ಚು > ಜನರನ್ನು ಭೋಗದಾಸರನ್ನಾಗಿ ಮಾಡಬೇಕು. ‘ಕಡಿಮೆ ಶ್ರಮ, ಹೆಚ್ಚು ಸುಖ’ದ ಆಮಿಷವನ್ನು > ಒಡ್ಡುತ್ತ, ಅದಕ್ಕಾಗಿ ಅವರೆಲ್ಲ ಕಾರ್ಬನ್ನನ್ನೇ ಅವಲಂಬಿಸುವಂತೆ ಮಾಡಬೇಕು- ಇದು ಹುನ್ನಾರ. > ಅದಕ್ಕೆ ಬೇಕಾದ ಸ್ವಾತಂತ್ರ್ಯ ಮತ್ತು ಸ್ವಚ್ಛಂದತೆಗೆ ಯಾವ ದೇಶವೂ ಕಡಿವಾಣ ಹಾಕದಂತೆ > ನೋಡಿಕೊಳ್ಳಬೇಕು. > > ಇಷ್ಟಕ್ಕೂ ಪಾಶ್ಚಿಮಾತ್ಯರ ಸ್ವಾತಂತ್ರ್ಯದ ಪರಿಕಲ್ಪನೆಯೇ ನಮ್ಮದಕ್ಕಿಂತ ಭಿನ್ನವಾಗಿದೆ. > ಅವರಿಗೆ ಮೂಲತಃ ಪ್ರಕೃತಿಯ ದೌರ್ಜನ್ಯದಿಂದ ಪಾರಾಗುವುದು ಬೇಕಿತ್ತು. ಹಾಗಾಗಿ ನಿಸರ್ಗ > ಒಡ್ಡುತ್ತಿರುವ ಸಂಕಷ್ಟಗಳಿಂದ ಪಾರಾಗಿ, ಸುಖ ಮತ್ತು ಸ್ವಾತಂತ್ರ್ಯವನ್ನು ಅನುಭವಿಸಲೆಂದೇ > ತಂತ್ರಜ್ಞಾನದ ಹತಾರಗಳು ಪಾಶ್ಚಾತ್ಯ ದೇಶಗಳಲ್ಲಿ ಮೊದಲು ರೂಪುಗೊಂಡವು. > > ದಟ್ಟ ಅರಣ್ಯದ ಡೊಂಕು ರಸ್ತೆಯಲ್ಲಿ ತಂಗಾಳಿಯನ್ನು ಸೀಳುತ್ತ ಕಾರಿನಲ್ಲಿ ಜೋರಾಗಿ ಸಾಗುವುದೇ > ಸುಖದ ಪರಮೋಚ್ಚ ಹಂತ ಎಂಬಂಥ ಜಾಹೀರಾತುಗಳು 50 ವರ್ಷಗಳ ಹಿಂದೆ ಪಶ್ಚಿಮದ ದೇಶಗಳಲ್ಲಿ > ಬರುತ್ತಿದ್ದವು. ಈಗ ನಮ್ಮ ಟಿವಿಗಳಲ್ಲೂ ಅಂಥದ್ದೇ ಜಾಹೀರಾತು ಬರುತ್ತಿವೆ. ನಿಸರ್ಗವನ್ನು > ಮಣಿಸಬೇಕು, ಭೋಗಿಸಬೇಕೆಂಬ ಸಿದ್ಧಸೂತ್ರವೇ ಎಲ್ಲ ಕಡೆ ರಾರಾಜಿಸುತ್ತವೆ. > > ನಮ್ಮ ಮೇಲೆ ಹೇರಲಾದ ತಂತ್ರಜ್ಞಾನದ ಈ ಅಹಮಿಕೆಯನ್ನು, ನಾವು ಒಪ್ಪಿಕೊಂಡ ಈ ದಾಸ್ಯತ್ವವನ್ನು > ಪ್ರಶ್ನಿಸುವ ಚಿಂತನಶೀಲ ಸಾಹಿತ್ಯ ಕೃತಿಗಳು ಏಕೆ ಬರುತ್ತಿಲ್ಲ? ಭೋಗಸ್ವಾತಂತ್ರ್ಯದ ಕುರಿತು, > ಹವಾಮಾನದ ತೀವ್ರತೆಯ ಕುರಿತು ಚರ್ಚಿಸುವುದೆಂದರೆ ಬುದ್ಧಿಜೀವಿಗಳಿಗೆ ಏಕೆ ಪರಿಧಿಯಂಚಿನ > ಚಟುವಟಿಕೆಯಾಗಿ ಕಾಣುತ್ತಿದೆ? ಹಿಂದಿನ ಕಾಲದ ನಮ್ಮ ಮೌಲಿಕ ಸಾಹಿತ್ಯಗಳೆಲ್ಲ ಸ್ವಾತಂತ್ರ್ಯದ > ವಿವಿಧ ಪರಿಕಲ್ಪನೆಗಳ ಸುತ್ತವೇ ಇದ್ದವು. > > ಶೋಷಣೆ, ಲೈಂಗಿಕ ದೌರ್ಜನ್ಯ, ಶೂದ್ರ ಸಂಸ್ಕೃತಿ, ರಾಜಕೀಯ ಮೇಲಾಟಗಳೇ ಮುಂತಾದ ಸಾಮಾಜಿಕ > ಸ್ಥಿತ್ಯಂತರಗಳನ್ನು ದಾಖಲಿಸುವ ಸಾಹಿತ್ಯಗಳೂ ಮೂಲತಃ ಸ್ವಾತಂತ್ರ್ಯದ ವಿಶ್ಲೇಷಣೆಯೇ > ಆಗಿದ್ದವು. ಈಗ ಎಲ್ಲರ ಬದುಕಿನ ಎಲ್ಲ ಆಯಾಮಗಳನ್ನೂ ಅಸ್ಥಿರಗೊಳಿಸಬಲ್ಲ ಸಂಕಷ್ಟಗಳು > ಎದುರಾಗುತ್ತಿವೆ. ಸ್ವಾತಂತ್ರ್ಯಹರಣವಾಗುತ್ತಿದೆ. > > ಆದರೂ ಅದು ನಮ್ಮ ಗಮನಕ್ಕೆ ಬರುತ್ತಿಲ್ಲ. ಹವಾಮಾನದ ಉತ್ಪಾತಗಳು ಮುಂಬೈ, ಚೆನ್ನೈ, > ದಿಲ್ಲಿಯನ್ನೂ ತಟ್ಟುತ್ತಿದ್ದರೂ ತಟ್ಟಿಸಿಕೊಳ್ಳದಂತೆ ತಮ್ಮದೇ ಗೋಪುರದಲ್ಲಿ ಬುದ್ಧಿಜೀವಿಗಳು > ನಿಂತಿರುತ್ತಾರೆ. > > ಹವಾಮಾನದ ವೈಪರೀತ್ಯದಿಂದಾಗಿ ಪ್ರವಾಹವಿರಲಿ, ಬರಗಾಲವಿರಲಿ, ಪರಿಸರ ನಿರಾಶ್ರಿತರು > ಪ್ರವಾಹದಂತೆ ತಮ್ಮ ಮೂಲ ನೆಲೆಗಳನ್ನು ಬಿಟ್ಟು ನಗರಗಳತ್ತ ಬರುತ್ತಿದ್ದಾರೆ.ಬಂಗಾಳದ ಜನರು > ದಿಲ್ಲಿಯ ಕಡೆ, ಬಾಂಗ್ಲಾ ದೇಶದ ಜನರು ನಮ್ಮ ದೇಶದ ಕಡೆ ಬರುತ್ತಿದ್ದರೆ ಸುಡಾನ್, ಸಿರಿಯಾ, > ಆಫ್ರಿಕದ ಸಹೇಲ್ ಪ್ರಾಂತಗಳಿಂದ ನಿರಾಶ್ರಿತರು ಯುರೋಪ್ ಕಡೆ ಸಾಗುತ್ತಿದ್ದಾರೆ. > > ಶಾಂತಸಾಗರದಲ್ಲಿನ ಟುವಾಲು ದ್ವೀಪದೇಶ ಮುಳುಗಲಿದೆ, ಹತ್ತು ಸಾವಿರ ಜನರು ರಾಷ್ಟ್ರವನ್ನೇ > ಕಳೆದುಕೊಳ್ಳಲಿದ್ದಾರೆ ಎಂಬ ಆತಂಕದ ಮಾತು ಅಲ್ಲಲ್ಲಿ ಕೇಳಬರುತ್ತಿದೆ ನಿಜ.ಆದರೆ ಏಷ್ಯದ > ಸಮಸ್ಯೆಗಳ ಭೀಕರತೆಯನ್ನು ಯಾರೂ ಗ್ರಹಿಸಿದಂತಿಲ್ಲ. ಬಾಂಗ್ಲಾದೇಶದ ಒಂದು ದ್ವೀಪ (ಭೋಲಾ > ದ್ವೀಪ) ಈಗಾಗಲೇ ಭಾಗಶಃ ಮುಳುಗಿರುವುದರಿಂದ ಐದು ಲಕ್ಷ ಜನರು ಆಗಲೇ ನಿರಾಶ್ರಿತರಾಗಿ ವಲಸೆ > ಹೋಗಿದ್ದಾರೆ. > > ಪಾಕಿಸ್ತಾನದಲ್ಲಿ ಸಿಂಧೂ ನದಿಯ ಮುಖದಲ್ಲಿ ಉಪ್ಪುನೀರು ನುಗ್ಗಿದ್ದರಿಂದ ಹತ್ತು ಲಕ್ಷಕ್ಕೂ > ಹೆಚ್ಚು ಎಕರೆ ಭೂಮಿ ನಿರುಪಯುಕ್ತವಾಗಿದೆ. ಹವಾಮಾನ ಬದಲಾವಣೆ ಉಗ್ರವಾಗುತ್ತ ಹೋದಂತೆ ಅರಬ್ಬೀ > ಸಮುದ್ರದಲ್ಲೂ ಚಂಡಮಾರುತಗಳು, ವರ್ಷಾಘಾತಗಳು ಹೆಚ್ಚುತ್ತವೆಂದು ವಿಜ್ಞಾನಿಗಳು > ಹೇಳುತ್ತಿದ್ದಾರೆ. ಅದರ ಪರಿವೆ ಇಲ್ಲದಂತೆ ಇಡೀ ಪಶ್ಚಿಮ ಕರಾವಳಿಗುಂಟ ಅಭಿವೃದ್ಧಿಯ > ದುಂದು-ಭಿ ಮೊಳಗುತ್ತಿದೆ. > > ಮುಂಬೈ ಶೇರುಪೇಟೆ, ರಿಸರ್ವ್ ಬ್ಯಾಂಕ್, ಪರಮಾಣುಸ್ಥಾವರ, ನೌಕಾನೆಲೆ, ಪೆಟ್ರೊಖಜಾನೆಗಳನ್ನು > ಬಚಾವು ಮಾಡುವ ನೀಲನಕ್ಷೆಯೇ ನಮ್ಮಲ್ಲಿಲ್ಲ. ಆದರೆ ಬಡವರನ್ನೂ ಜಿಡಿಪಿಯನ್ನೂ ಒಟ್ಟೊಟ್ಟಿಗೆ > ಮೇಲಕ್ಕೆತ್ತುವ ಹೆಸರಿನಲ್ಲಿ ಕೆಲವರನ್ನಷ್ಟೇ ಮೇಲಕ್ಕೆತ್ತಬಲ್ಲ ಯೋಜನೆಗಳು > ರೂಪಿತವಾಗುತ್ತವೆ. > > ರಾಜಕಾರಣಿಗಳು, ರಾಜತಾಂತ್ರಿಕ ತಜ್ಞರು, ಯೋಜನಾಪಟುಗಳು ಸೇರಿ ವಿಜ್ಞಾನ ತಂತ್ರಜ್ಞಾನವನ್ನು > ಬಳಸಿಕೊಂಡು ಏನೋ ಮಾಡುತ್ತಾರೆ, ಎಲ್ಲವನ್ನೂ ಸರಿಪಡಿಸುತ್ತಾರೆ ಎಂಬ ಭ್ರಮೆಯಲ್ಲಿ > ನಾವಿದ್ದೇವೆ. ಆದರೆ ಸಂಕಷ್ಟ ಆರಂಭವಾಗಿದ್ದೇ ವಿಜ್ಞಾನ ತಂತ್ರಜ್ಞಾನಗಳ ಅತಿ ಬಳಕೆಯಿಂದ > ತಾನೆ? ತಂತ್ರಜ್ಞಾನದ ಭಜನೆಯನ್ನು ಬಿಟ್ಟು, ನಮ್ಮ ಆರ್ಥಿಕ ನೀತಿ, ಬದುಕಿನ ಶೈಲಿ ಮತ್ತು > ನಮ್ಮ ಆಶೋತ್ತರಗಳನ್ನು ಪೂರೈಸುವ ವಿಧಾನಗಳನ್ನು ಬದಲಿಸಬೇಕೆಂದು ಯಾರಿಗೂ ಅನ್ನಿಸುತ್ತಿಲ್ಲ > ಏಕೆ? > > ಪೋಪ್ ಮತ್ತು ದಲಾಯಿ ಲಾಮಾರನ್ನು ಬಿಟ್ಟರೆ ಇತರ ಯಾವ ಧರ್ಮಗುರುಗಳೂ ಈ ಬೃಹತ್ > ಸ್ಥಿತ್ಯಂತರಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಳೆದ ವರ್ಷ ಪ್ಯಾರಿಸ್ ಸಮ್ಮೇಳನಕ್ಕೆ ಮುನ್ನ > ಪೋಪ್ ಹೊರಡಿಸಿದ ಧರ್ಮಾದೇಶ (ಎನ್ಸೈಕ್ಲಿಕಲ್) ಮಾತ್ರವೇ ಮನುಕುಲಕ್ಕೆ ಮುಂದಿನ ದಾರಿಯನ್ನು > ತೋರಬಲ್ಲ ಸಮರ್ಥ ಸಾಹಿತ್ಯವಾಗಿದೆ (184 ಪುಟಗಳ ಈ ಜಾಗತಿಕ ಸುತ್ತೋಲೆ ಕುರಿತು 1 ಜುಲೈ > 2015ರ ಇದೇ ಅಂಕಣದಲ್ಲಿ ಪ್ರಸ್ತಾಪಿಸಲಾಗಿತ್ತು). > > ಜಗತ್ತನ್ನು ಹಿಂಡುತ್ತಿರುವ ಲಾಭಬಡುಕ ಶಕ್ತಿಗಳನ್ನು ಹಾಗೂ ಸಾರ್ವತ್ರಿಕ ಹಿತಚಿಂತನೆಯಿಲ್ಲದ > ನಾಯಕತ್ವವನ್ನು ಎದುರಿಸಿ ಅರ್ಥಪೂರ್ಣ ಬದುಕನ್ನು ಹೇಗೆ ಸಾಧಿಸಬೇಕು. ಭೋಗಸಂಸ್ಕೃತಿಯನ್ನು > ಎಲ್ಲಿಯವರೆಗೆ ಅನುಸರಿಸಬೇಕು ಎಂಬುದರ ಬಗ್ಗೆ ಅದರಲ್ಲಿ ಮಾರ್ಗದರ್ಶಿ ಸೂತ್ರಗಳಿವೆ. > > -ಹೀಗೆಂದು ಹೇಳುವ ಅಮಿತಾವ್ ಘೋಷ್ ಗಾಂಧೀಜಿಯನ್ನು ಅಲ್ಲಲ್ಲಿ ನೆನಪಿಸಿಕೊಳ್ಳುತ್ತಾರೆ. > ಗಾಂಧಿ ತೋರಿದ ಮಾರ್ಗವನ್ನು ಮರೆತು ನಾವೆಲ್ಲ ಭೋಗಮಾರ್ಗದಲ್ಲಿ ಬಹುದೂರ ಬಂದಿದ್ದೇವೆ. > ಹಿಂದಿರುಗಲು ದಾರಿಯೇ ಕಾಣದಷ್ಟು ತಿಪ್ಪೆರಾಶಿಗಳನ್ನು ಆಕಾಶದೆತ್ತರಕ್ಕೆ ಚೆಲ್ಲಾಡುತ್ತ > ಬಂದಿದ್ದೇವೆ. ಬದಲೀ ಮಾರ್ಗದ ಬಗ್ಗೆ ಚಿಂತಿಸುವ ಯಾರಾದರೂ ಇದ್ದಾರೆಯೇ ಎಂದು ಘೋಷ್ > ಕೇಳುತ್ತಾರೆ. > > ಈ ಸಂಕಷ್ಟದಲ್ಲಿ, ‘ಅಮೆರಿಕ ಯಾಕೆ ನಮಗೆ ದಾರಿ ತೋರಿಸುತ್ತಿಲ್ಲವೆಂದು ನಮ್ಮಲ್ಲಿ ಕೆಲವರು > ಅಲವತ್ತುಕೊಳ್ಳುತ್ತಿದ್ದಾರೆ- ಅದು ಬೇರೆ ಕೇಡು’ ಎಂದು ಅವರ ಜತೆ ಸಂವಾದ ನಡೆಸಿದ ಡೌನ್ ಟು > ಅರ್ಥ್ ಸಂಪಾದಕಿ ಸುನಿತಾ ನಾರಾಯಣ್ ವ್ಯಂಗ್ಯವಾಡುತ್ತಾರೆ. > > ಅಮೆರಿಕ ಏನು ದಾರಿ ತೋರಿಸೀತು? ಮೊನ್ನೆ ಆಗಸ್ಟ್ 11ರಂದು ಅಲ್ಲಿನ ಲೂಸಿಯಾನಾ ರಾಜ್ಯದಲ್ಲಿ > ಅದೆಂಥ ವಿಕೋಪ ಸಂಭವಿಸಿತೆಂದರೆ ಕೋಲಾರದಲ್ಲಿ ಇಡೀ ವರ್ಷ ಸುರಿಯುವಷ್ಟು ಮಳೆ ಒಮ್ಮೆಲೇ ಅಲ್ಲಿ > ಸುರಿಯಿತು. 1.1 ಲಕ್ಷಕ್ಕೂ ಹೆಚ್ಚು ಮನೆಗಳು ಧ್ವಂಸವಾದವು. 11 ಸಾವಿರ ಆಶ್ರಯತಾಣಗಳನ್ನು > ನಿರ್ಮಿಸಬೇಕಾಯಿತು. ‘ಸಾವಿರ ವರ್ಷಕ್ಕೊಮ್ಮೆಯೂ ಬರದಿದ್ದ’ ಪ್ರಳಯ ಅದಾಗಿತ್ತು. ದಾರಿ ತೋರುವ > ಸ್ಥಿತಿಯಲ್ಲಿ ಯಾರಿದ್ದಾರೆ? > > ಈಗಿನ ಪೀಳಿಗೆಗಂತೂ ದಾರಿ ಕಾಣಲಿಕ್ಕಿಲ್ಲ. ಮುಂದಿನ ಪೀಳಿಗೆಗಾದರೂ ಸೂಕ್ತ ಶಿಕ್ಷಣವನ್ನು > ಕೊಡೋಣವೆಂದರೆ ಹೈಟೆಕ್ ರಾಕೆಟ್ಗಳೇ ನಮಗೆ ಕಾಣುತ್ತವೆ ವಿನಾ, ಹವಾಮಾನ ವಿಜ್ಞಾನದ ಕಡೆ ಗಮನ > ಹರಿಯುವುದು ಕಡಿಮೆ. ಬರ ನೀಗಿಸುವ, ನೀರಿಂಗಿಸುವ, ಬದುಕಿನ ಸುಸ್ಥಿರ ಮಾರ್ಗವನ್ನು ಸೂಚಿಸುವ > ಕೈಮರಗಳೇ ನಮಗೆ ಕಾಣುತ್ತಿಲ್ಲ. > > ಅಮೆರಿಕದಲ್ಲಿ ಸಿಗುವ ಬರ್ಗರ್ನದೇ ಡಿಟ್ಟೋ ರುಚಿ, ಆಕಾರ, ಗಾತ್ರದ ಬರ್ಗರ್ಗಳು > ಚೆನ್ನೈಯಲ್ಲೂ ಶಾಂಘೈಯಲ್ಲೂ ಸಿಗುತ್ತಿವೆ ಎಂದು ಜಾಗತೀಕರಣದ ಭಜಕರು ಖುಷಿಯಿಂದ ಹೇಳುತ್ತಾರೆ. > ಅಮೆರಿಕದ ಲೂಸಿಯಾನಾದಲ್ಲಿ ಬಂದಷ್ಟೇ ಗಾತ್ರದ ಜಡಿಮಳೆ ಚೆನ್ನೈಯಲ್ಲೂ ರಾಜಸ್ತಾನದ > ಭೀಲ್ವಾಡಾದಲ್ಲೂ ಬರುತ್ತಿದೆ. > > Hareeshkumar K > GHS HUSKURU > MALAVALLI TQ > MANDYA DT > MOB 9880328224 > > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.