Sir your article right
On 25-May-2017 3:46 PM, "HAREESHKUMAR K Agasanapura" <harihusk...@gmail.com>
wrote:

> http://m.prajavani.net/article/2017_05_22/493076
>
> *ಫಲಿತಾಂಶ ಕೊರತೆಯೂ ಬಡ್ತಿ ಕಡಿತವೂ*
>
> 22 May, 2017
>
> ಬಿಂಡಿಗನವಿಲೆ ಭಗವಾನ್
>
>
> <https://www.facebook.com/sharer/sharer.php?u=https%3A%2F%2Fgoo.gl%2FVI8eUa>
> <https://twitter.com/intent/tweet?text=%E0%B2%AB%E0%B2%B2%E0%B2%BF%E0%B2%A4%E0%B2%BE%E0%B2%82%E0%B2%B6+%E0%B2%95%E0%B3%8A%E0%B2%B0%E0%B2%A4%E0%B3%86%E0%B2%AF%E0%B3%82+%E0%B2%AC%E0%B2%A1%E0%B3%8D%E0%B2%A4%E0%B2%BF+%E0%B2%95%E0%B2%A1%E0%B2%BF%E0%B2%A4%E0%B2%B5%E0%B3%82++https%3A%2F%2Fgoo.gl%2FVI8eUa>
> <https://plus.google.com/share?url=https%3A%2F%2Fgoo.gl%2FVI8eUa>
> <http://www.pinterest.com/pin/find/?url=https%3A%2F%2Fgoo.gl%2FVI8eUa>
> <http://www.linkedin.com/shareArticle?mini=true&title=%E0%B2%AB%E0%B2%B2%E0%B2%BF%E0%B2%A4%E0%B2%BE%E0%B2%82%E0%B2%B6+%E0%B2%95%E0%B3%8A%E0%B2%B0%E0%B2%A4%E0%B3%86%E0%B2%AF%E0%B3%82+%E0%B2%AC%E0%B2%A1%E0%B3%8D%E0%B2%A4%E0%B2%BF+%E0%B2%95%E0%B2%A1%E0%B2%BF%E0%B2%A4%E0%B2%B5%E0%B3%82++&url=https%3A%2F%2Fgoo.gl%2FVI8eUa>
>
> ‘ಶಿಕ್ಷಕರಿಗೆ ಇನ್‌ಕ್ರಿಮೆಂಟ್ ಕಡಿತ’  ವರದಿ (ಪ್ರ.ವಾ., ಮೇ 18) ಗಮನಿಸಿದೆ. ರಾಜಕುಮಾರನ
> ವಿದ್ಯಾರ್ಜನೆಯ ಪ್ರಗತಿ ತಿಳಿಯಲು ರಾಜಸಭೆಯಲ್ಲಿ ಮಂತ್ರಿ ಅವನಿಗೆ ಬಗೆ ಬಗೆಯಾಗಿ
> ಪ್ರಶ್ನಿಸುತ್ತಾನೆ. ರಾಜಕುಮಾರ ಉತ್ತರಿಸದ ಒಂದೊಂದು ಪ್ರಶ್ನೆಗೂ ರಾಜಗುರುವಿಗೆ ಒಂದೊಂದು
> ಬಾರಿ ಥಳಿಸಲಾಗುತ್ತದೆ!
>
> ಬಿ.ಬಿ.ಎಂ.ಪಿ. ತನ್ನ ವ್ಯಾಪ್ತಿಯ ಶಾಲಾ– ಕಾಲೇಜುಗಳಲ್ಲಿನ ಶಿಕ್ಷಕರಿಗೆ ಪರೀಕ್ಷೆಗಳಲ್ಲಿ
> ಫಲಿತಾಂಶ ‘ಕುಸಿತ’ಕ್ಕೆ ವೇತನ ಬಡ್ತಿ ಕಡಿತಗೊಳಿಸುವ ನಿರ್ಧಾರ ಹಳೆಯ ಪೌರಾಣಿಕ ಸಿನಿಮಾವೊಂದರ
> ಈ ಹಾಸ್ಯ ಸನ್ನಿವೇಶವನ್ನು ನೆನಪಿಸುತ್ತದೆ.
>
>
>
> ಶಿಕ್ಷಕರು ಚೆನ್ನಾಗಿ ಪೂರ್ವತಯಾರಿ ನಡೆಸಿ ಆಯಾ ತರಗತಿ ನಿರ್ವಹಿಸಬೇಕು, ಅವರ ಬೋಧನೆ ಎಲ್ಲ
> ವಿದ್ಯಾರ್ಥಿಗಳನ್ನೂ ತಲುಪಬೇಕು ಎನ್ನುವುದು ಸರಿಯೇ. ಆದರೆ ಪರೀಕ್ಷೆಯಲ್ಲಿ ಇಂತಿಷ್ಟು ಮಂದಿ
> ವಿದ್ಯಾರ್ಥಿಗಳನ್ನು  ತೇರ್ಗಡೆಯಾಗಿಸುತ್ತೇನೆಂದು ಶಿಕ್ಷಕರು ಭರವಸೆ ನೀಡಲು ಸಾಧ್ಯವೇ?
>
>
>
> ಮಕ್ಕಳು ಪರೀಕ್ಷೆಗಳಲ್ಲಿ ಗಳಿಸುವ ಗ್ರೇಡ್, ದರ್ಜೆ, ಅಂಕಗಳನ್ನು ಒಂದು ಉತ್ಪನ್ನವಾಗಿ
> ಪರಿಗಣಿಸಲಾಗದು. ಪಾಠವನ್ನು ಮಕ್ಕಳಿಗೆ ಒಂದೇ ಸೂರಿನಡಿ ಬೋಧಿಸಲಾಗುತ್ತದೆ. ಒಬ್ಬೊಬ್ಬ
> ವಿದ್ಯಾರ್ಥಿಯ ಏಕಾಗ್ರತೆ, ಗ್ರಹಣಶಕ್ತಿ, ಆಸಕ್ತಿ ಒಂದೇ ತೆರನಾಗಿರದು. ಆಯಾ ವಿಷಯದಲ್ಲಿ
> ಮಾಸ್ತರರು ಎಷ್ಟೇ ಹೊಣೆಗಾರಿಕೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿದರೂ ತರಗತಿಯಲ್ಲಿರುವವರೆಲ್ಲ
> ಸರಿಸುಮಾರು ಒಂದೇ ಅಂಕ ಪಡೆಯುವುದಿರಲಿ ತೇರ್ಗಡೆಯಾಗುವುದು ಸಹ ಅಸಂಭವ.
>
>
>
> ಶಿಕ್ಷಕರ ಸಂವಹನಕ್ಕೂ ಇತಿಮಿತಿಗಳಿರುತ್ತವೆ. ಕುದುರೆಯನ್ನು ನೀರಿನ ತನಕ ಕರೆದೊಯ್ಯಬಹುದು.
> ನೀರು ಕುಡಿಯಬೇಕಾದ್ದು ಕುದುರೆಯೇ.  ಮಕ್ಕಳ ವಯೋಸಹಜವೆನ್ನಬಹುವಾದ ಕೀಟಲೆ, ಗದ್ದಲ, ಗೌಜು,
> ಅಶಿಸ್ತು, ತಂಟೆಗಳೊಂದಿಗೆ ಸೆಣಸಾಡುತ್ತಲೇ ಪಾಠ ಮಾಡಬೇಕಾಗುತ್ತದೆ.
>
>
>
> ಅಚ್ಚುಕಟ್ಟಾಗಿ ಬೋಧಿಸಬೇಕು, ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಬೇಕು ಎನ್ನುವ ಆಶಯ ಎಲ್ಲ
> ಶಿಕ್ಷಕರಿಗೂ ಇರುತ್ತದೆ. ಹಾಗಾಗಿಯೇ ಅವರು  ಮಕ್ಕಳಲ್ಲಿ, ಸಹೋದ್ಯೋಗಿಗಳಲ್ಲಿ, ಪೋಷಕರಲ್ಲಿ
> ತಮ್ಮ ಬೋಧನೆ ಹೇಗಿದೆ ಎಂದು ಅಭಿಪ್ರಾಯಗಳನ್ನು ಕುತೂಹಲದಿಂದ ಕಲೆಹಾಕುತ್ತಾರೆ.
> ಕೊರತೆಯಿದ್ದರೆ ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
>
>
>
> ಅಧ್ಯಾಪಕರ ಬೋಧನೆಯ ಪಕ್ವತೆ, ಶ್ರೇಷ್ಠತೆಯನ್ನು ಮೂರು ತಾಸುಗಳ ಅವಧಿಯ ಪರೀಕ್ಷೆಯಲ್ಲಿ
> ವಿದ್ಯಾರ್ಥಿಗಳು ಬರೆಯುವ ಉತ್ತರಗಳಿಗೆ ಸೀಮಿತವಾಗಿಸುವುದು ಅತಾರ್ಕಿಕ. ಬೋಧನೆ ಮಕ್ಕಳನ್ನು
> ನೇರವಾಗಿ ಪ್ರಭಾವಿಸಬಹುದು, ಕೆಲವೊಮ್ಮೆ ಪ್ರಭಾವ ಬೀರದೆಯೂ ಇರಬಹುದು.  ಕಾಲಾಂತರದಲ್ಲಿ ಅದರ
> ಪ್ರಭಾವ ಅವರ ಮಿದುಳಿನಲ್ಲಿ ಕುಡಿಯೊಡೆಯುವುದೇ ಸಹಜ ಶಿಕ್ಷಣ.
>
>
>
> ಮಕ್ಕಳು ಪರೀಕ್ಷೆ ಎದಿರುಸುವಲ್ಲಿ ಪೋಷಕರ ಪಾತ್ರವೂ ಇದೆಯೆನ್ನುವುದನ್ನು ಮರೆಯಬಾರದು.
> ಮಕ್ಕಳ ಮಿತಿ–ಸಾಮರ್ಥ್ಯ ಅರಿತು ಅದಕ್ಕೆ ತಕ್ಕಂತೆ ಸ್ಪಂದಿಸಬೇಕು. ಮಾರ್ಗದರ್ಶನ ನೀಡಬೇಕು.
> ಮಕ್ಕಳನ್ನು ಸೆಳೆಯುವ ಮೊಬೈಲು, ಟಿ.ವಿ., ವಿಡಿಯೊ ಗೇಮ್‌ಗಳಂಥ ಆಕರ್ಷಣೆಗಳಿಗೆ  ಪರೀಕ್ಷಾ
> ದಿನಗಳು ಸಮೀಪಿಸುತ್ತಿರುವಾಗಲಾದರೂ ಕಡಿವಾಣ ಹಾಕಬಹುದಲ್ಲವೇ? ಮಕ್ಕಳ ಮನವೊಲಿಸುವ ಮೂಲಕವೇ ಈ
> ಕೆಲಸ ಮಾಡಬಹುದು.
>
>
>
> ‘ಇಂತಿಷ್ಟು ಫಲಿತಾಂಶ ತರಿಸಬೇಕು ನೋಡಿ’ ಎಂದು ಶಿಕ್ಷಕರ ಮೇಲೆ ಒತ್ತಡವೇರಿದರೆ ಅವರ ಚಿತ್ತ
> ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಪಡಿಸುವುದರತ್ತ ಮಾತ್ರ ಹರಿಯುವಂತೆ
> ಪ್ರೇರೇಪಿಸಿದಂತಾಗುತ್ತದೆ. ಅದರಿಂದ ನೈಜ ಬೋಧನೆ ಹಾಗೂ ಕಲಿಕೆಗೆ ಅವಕಾಶ ಕಡಿಮೆಯಾಗುತ್ತದೆ.
> ‘ಹೇಗಾದರೂ ಸರಿ’ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆಗೆ ಕನಿಷ್ಠ ಅಂಕಗಳನ್ನು
> ಪಡೆಯಬೇಕು ಎನ್ನುವ ಗುರಿ ಆತಂಕಕಾರಿ. ಅರಿವು, ವಿವೇಕ ಗೌಣವಾಗಿ ಅಂಕಮಲ್ಲತನ ಅದೇ
> ಪ್ರತಿಭೆಯೇನೊ ಎನ್ನುವಂತೆ ಮೆರೆಯುತ್ತದೆ.
>
>
>
> ತಮಗೆ ಪರೀಕ್ಷೆಗಿಂತ ಗುರು ಸಾನ್ನಿಧ್ಯ, ತಿಳಿವಳಿಕೆ, ಸಹಪಾಠಿಗಳ ಒಡನಾಟ, ಆಟೋಟ,
> ಗ್ರಂಥಾಲಯ, ವಿದ್ಯಾಲಯದ ಪರಿಸರ ಮುಖ್ಯ ಎನ್ನುವ ಎಳೆಯ ಮನಸ್ಸುಗಳು ಅಪರೂಪಕ್ಕಾದರೂ ಉಂಟು
> ತಾನೆ?  ಅನೇಕ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ  ಕೋರ್ಸ್, ಕಲಿಕಾ ವಿಷಯಗಳ ಆಯ್ಕೆಯೇ ಸರಿ
> ಇರುವುದಿಲ್ಲ. ಅವರು ಒಲುಮೆಯಿಂದ ‘ಇದನ್ನೇ ಕಲಿಯುವೆ’ ಎಂದಿರುವುದಿಲ್ಲ.
>
>
>
> ತಮಗೆ ಅಷ್ಟಾಗಿ ಆಸಕ್ತಿಯಿರದ ಕೋರ್ಸ್‌ ಅನ್ನು ಪೋಷಕರ ಒತ್ತಾಯಕ್ಕೆ ಮಣಿದು  ಕೆಲವರು
> ಆರಿಸಿಕೊಂಡಿರುತ್ತಾರೆ.  ಇನ್ನು ಪೋಷಕರೋ ಘನತೆ ಎಂದು ಭಾವಿಸಿಯೋ ಅಥವಾ ಯಾರನ್ನೋ ಮೆಚ್ಚಿಸಲು
> ತಮ್ಮ ಮಕ್ಕಳಿಗೆ ಇಂಥದ್ದನ್ನು ವ್ಯಾಸಂಗ ಮಾಡಿ ಎಂದಿರುತ್ತಾರೆ. ಒಲ್ಲದ್ದನ್ನು ಓದು,
> ಅದರಲ್ಲಿ ಯಶಸ್ಸು ಸಾಧಿಸು ಎನ್ನುವುದು ಅವರ ಪಾಲಿಗೆ ದೊಡ್ಡ ಶಿಕ್ಷೆಯಾದೀತು.
>
>
> ಎಳೆಗೂಸಿಗೂ ಕಲಿಕೆಯಲ್ಲಿ ಅದರದೇ ಆಸಕ್ತಿ ಇರುತ್ತದೆ. ಫಲಿತಾಂಶ ಕೇಂದ್ರಿತ ಬೋಧನೆಯು
> ಪಠ್ಯಕ್ಕಷ್ಟೇ ಅಂಟಿಕೊಳ್ಳುತ್ತದೆ. ಅದರ ಪರಿಣಾಮವಾಗಿ ಸ್ವಾರಸ್ಯ  ಕಳೆದುಕೊಳ್ಳುತ್ತದೆ.
> ಶಿಕ್ಷಕರು-ವಿದ್ಯಾರ್ಥಿಗಳ ನಡುವಿನ ಸಂವಾದದ ನೆಲೆಯಾಗಬೇಕಾದ ತರಗತಿಯಲ್ಲಿ ವಿಷಯದ ಬಗ್ಗೆ
> ಪ್ರಶ್ನೆಗಳಿಗೆ ಆಸ್ಪದವೇ ಇಲ್ಲವಾಗುತ್ತದೆ. ಅಲ್ಲಿ ಏನಿದ್ದರೂ ‘ಈ ಅಧ್ಯಾಯ ಪರೀಕ್ಷೆಗೆ
> ಮುಖ್ಯವೇ?’ ‘ಈ ಪ್ರಶ್ನೆ ಎಂದೂ ಕೇಳಿಲ್ಲವಲ್ಲ?’
>
>
>
> ‘ಯಾವ ಅಧ್ಯಾಯವನ್ನು ಈ ಬಾರಿ ಓದದೆ ಬಿಡಬಹುದು?’- ಇವೇ ಸಂದೇಹಗಳಾಗುತ್ತವೆ! ಒಂದು
> ವಿಷಯದಲ್ಲಿನ ಫಲಿತಾಂಶವನ್ನು ಇನ್ನೊಂದು ವಿಷಯದ ಫಲಿತಾಂಶಕ್ಕೆ ಹೋಲಿಸಲಾಗದು. ಏಕೆಂದರೆ
> ಸಾಮಾನ್ಯವಾಗಿ ವಿದ್ಯಾರ್ಥಿಗಳು ಐಚ್ಛಿಕ ವಿಷಯಗಳಿಗಿಂತ ಭಾಷಾ ವಿಷಯಗಳಲ್ಲಿ ಹೆಚ್ಚಿನ ಅಂಕ
> ಪಡೆಯುತ್ತಾರೆ.
>
>
>
> ಶೈಕ್ಷಣಿಕ ಪ್ರಕ್ರಿಯೆಯ ಒಂದು ಭಾಗವಷ್ಟೇ ಆದ ಫಲಿತಾಂಶದ ಕೊರತೆಯೆಂದ ಮಾತ್ರಕ್ಕೆ ಮಕ್ಕಳ
> ಜ್ಞಾನ, ಬುದ್ಧಿ ಶಕ್ತಿಯ ಕೊರತೆ ಎಂದು ತೀರ್ಮಾನಿಸುವ ಅಗತ್ಯವಿಲ್ಲ. ಶಿಕ್ಷಕರಿಗೆ ಸೇವಾ
> ಭದ್ರತೆ, ಆಗಿಂದಾಗ್ಗೆ ಅದರಲ್ಲೂ ವಿಶೇಷವಾಗಿ ಪಠ್ಯ ವಿಷಯ ಮಾರ್ಪಾಡಾದಾಗ ಅಧ್ಯಾಪಕರಿಗೆ
> ಸೂಕ್ತ ತರಬೇತಿ, ಪುನರ್‌ಮನನ ಕಮ್ಮಟಗಳನ್ನು ಏರ್ಪಡಿಸುವುದು, ಶೈಕಣಿಕ ವರ್ಷಾರಂಭಕ್ಕೆ ಮೊದಲೇ
> ಮಕ್ಕಳಿಗೆ ಪಠ್ಯ ಪುಸ್ತಕಗಳ ಪೂರೈಕೆ, ಸರಳ ಸಮವಸ್ತ್ರ, ಭಾರವೆನ್ನಿಸದ ಪುಸ್ತಕ ಚೀಲ ಮುಂತಾದ
> ಕ್ರಮಗಳು ಪರಿಣಾಮಕಾರಿಯಾಗಬಲ್ಲ ಫಲಿತಾಂಶದ ಉತ್ತಮೀಕರಣದ ದಿಟ್ಟ ಹೆಜ್ಜೆಗಳು.
>
>
> ಮಕ್ಕಳಲ್ಲಿ ಪುಸ್ತಕ ಪ್ರೀತಿ ಮೂಡಿಸಿ, ಅವರಲ್ಲಿ ಸ್ವಅಧ್ಯಯನ ಪ್ರವೃತ್ತಿ ಬೆಳೆಸಬೇಕಿದೆ.
> ಶಿಕ್ಷಕರನ್ನು ವಿದ್ಯಾರ್ಥಿಗಳ, ಪೋಷಕರ ಒಟ್ಟಾರೆ ಸಮಾಜದ ಮುಂದೆ ತಪ್ಪಿತಸ್ಥರನ್ನಾಗಿ ಮಾಡಿ
> ‘ದಂಡ’ ವಿಧಿಸುವುದು ಭಾವಿ ಪ್ರಜೆಗಳನ್ನು ಅಣಿಗೊಳಿಸುವ ಕೈಂಕರ್ಯವನ್ನು ಅಪಮಾನಿಸಿದಂತೆ.
>
> Hareeshkumar K
> GHS Huskuru
> Malavalli TQ
> Mandya Dt
> 9880328224
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to