ಧನ್ಯವಾದಗಳು ಮೇಡಂ. On Dec 26, 2017 4:56 PM, "Savitha H B Savitha" <savithahb1...@gmail.com> wrote:
> Madam super > > On 25-Dec-2017 6:18 pm, "Anasuya M R" <anasuy...@gmail.com> wrote: > >> ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ 'ಮೂಕಜ್ಜಿಯ ಕನಸುಗಳು': >> ಶಿವರಾಮ ಕಾರಂತರ ಕಾದಂಬರಿಗಳನ್ನು ವಿಮರ್ಶೆ ಮಾಡುವವವರಿಗೆ ಕೇವಲ ಸಾಹಿತ್ಯ ಜ್ಞಾನ ಇದ್ದರೆ >> ಸಾಲದು, ಅದಕ್ಕೆ ಅಪಾರ ಜೀವನಾನುಭವ ಜೊತೆಗೆ ಸಂಸ್ಕಾರ ಬಲ ಅತ್ಯಗತ್ಯ. ವಿಮರ್ಶೆಯ ಎಟುಕಿಗೆ >> ಮೀರಿದ ಕೃತಿ ರಚನೆಯಲ್ಲಿ ಕಾರಂತರು ಸಿದ್ಧಹಸ್ತರು. ಮೂಕಜ್ಜಿಯ ಕನಸುಗಳು ಅಂತದ್ದರಲ್ಲಿ >> ಒಂದು. ಭಾರತೀಯ ಪರಂಪರೆಯಲ್ಲಿ ಸಾವಿರಾರು ವರ್ಷಗಳಿಂದ ತಳವೂರಿದ್ದ ನಂಬಿಕೆಗಳನ್ನು, >> ಸಂಪ್ರದಾಯವಾದಿ ಆಚರಣೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ವಿಮರ್ಶಿಸುವ ಈ ಕಾದಂಬರಿ, ಕಾರಂತರ >> ಕಾದಂಬರಿಗಳಲ್ಲೇ ಅತ್ಯಂತ ವಿಶಿಷ್ಟವಾದದ್ದು. ಹಾಗಾದರೆ ಯಾರು ಈ ಮೂಕಜ್ಜಿ? ಕಾರಂತರೇ >> ಮುನ್ನುಡಿಯಲ್ಲಿ ಹೇಳಿಕೊಂಡಿರುವಂತೆ ‘ಸಾಂಪ್ರದಾಯಿಕತೆಯಿಂದ ಹೆಪ್ಪುಗಟ್ಟಿದ ಮನಸ್ಸುಗಳನ್ನು >> ತುಸುತುಸುವಾಗಿ ಕಾಯಿಸಿ ಕರಗಿಸುವ ಕೆಲಸ ಅವಳದ್ದು. ಅಂತ ಅಜ್ಜಿಯೊಬ್ಬಳು ಇದ್ದಳೇ ಎನ್ನುವ >> ಸಂಶಯ ಬಂದರೆ, ನಮ್ಮ ಸಂಸ್ಕೃತಿಯ, ನಂಬುಗೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು >> ತಿಳಿದರಾಯಿತು. ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ. ಪ್ರಾಮಾಣಿಕ ಸಂದೇಹದ ರೂಪದಲ್ಲಿ >> ಬದುಕಿಕೊಂಡೆ ಇದ್ದಾಳೆ’. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿಯ ಬಗ್ಗೆ ಹೆಚ್ಚೇನು >> ಬರೆಯುವುದಕ್ಕಿಂತ ನಮ್ಮಲ್ಲಿನ ವಿಚಾರ-ವಿವೇಕ ಬೆಳೆಸುವಂತಹ ಮೂಕಜ್ಜಿ ಹೇಳುವ ಒಂದಷ್ಟು >> ಮಾತುಗಳನ್ನು ನೆನೆಯೋಣ. >> >> “ಆ ಬಸರೀಕಟ್ಟೆಯಲ್ಲಿ ಹುಟ್ಟಿ, ಬೂದಿಕಟ್ಟೆಯಲ್ಲಿ ಮುಗಿಯುವ ಮೊದಲು, ನಾವು >> ಓಡಾಡಿಕೊಂಡಿರುವ ಕಟ್ಟೆ ಬಾಳಿನ ಕಟ್ಟೆಯಲ್ಲವೇ?” >> >> “ಗುಡಿಯೂ ಶಾಶ್ವತವಲ್ಲ; ಅಲ್ಲಿನ ದೇವರೂ ಶಾಶ್ವತವಲ್ಲ. ಒಬ್ಬ ಶಾಶ್ವತವಾದ ದೇವರು >> ಇದ್ದನೆಂದರೂ, ಅವನು ಎಂಥವನೆಂದು ನಮ್ಮ ಎಟುಕಿಗೆ ಸಿಕ್ಕಿದ್ದಿಲ್ಲ. ನಾವು ನಮ್ಮ ನಮ್ಮ >> ಬುದ್ಧಿಗೆ ಸಮನಾಗಿ, ನೂರು, ಸಾವಿರಗಟ್ಟಲೆ ದೇವರನ್ನು ಮಾಡಿಕೊಂಡು ‘ಇದೇ ನಿಜ’ ‘ಅದೇ ನಿಜ’ >> ಎಂತ ಮರುಳು ಮಾತನಾಡಿದವರು. ಸಂಕಟ ಬಂದಾಗೆಲ್ಲ ಅಂತ ದೇವರ ಹತ್ತಿರ ಹೋಗಿ ‘ಅದನ್ನು ಕೊಡು, >> ಇದನ್ನು ಕೊಡು’ ಎಂದು ಬೇಡಿದವರು.” >> >> “ಹೆರುವುದು ಅಸಹ್ಯವಲ್ಲ; ಇರುವುದು ಅಸಹ್ಯವಲ್ಲ; ಸಾಯುವುದೂ ಅಲ್ಲ, ಹುಟ್ಟಿಸುವುದು >> ಅಸಹ್ಯವೇ? ಗಂಡು ಹೆಣ್ಣುಗಳನ್ನು ಒಟ್ಟಿಗೆ ಬೆಸೆದು, ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ >> ಸುಖಕ್ಕೋ, ದು:ಖಕ್ಕೋ ಒಂದುಗೂಡಿಸುವ ಶಕ್ತಿ ಅಸಹ್ಯವೇ?” >> >> “ದೇವರು(?) ಕೊಟ್ಟ ಆಯುಷ್ಯವನ್ನು ಇದ್ದಷ್ಟು ಕಾಲ ಉಳಿದ ಮಕ್ಕಳ ಜೊತೆ ಬಾಳಿ ಬದುಕುವುದೇ >> ಪೂಜೆ ಎಂಬ ಬುದ್ದಿ ಯಾಕೆ ಬರಬಾರದು ನಮಗೆ?” >> >> “ಹುಟ್ಟಿ ಬಂದಿದ್ದೇವೆ, ಕೈ, ಮೂಗು, ಬಾಯಿ, ಪಡೆದು. ಅವೆಲ್ಲ ಇರುವುದು ಯಾತಕ್ಕೆ? >> ಕಚ್ಚಲಿಕ್ಕೆ ಹುಲಿಯ ‘ಬಾಯಿ ಕೊಡು’, ಹೊರಲಿಕ್ಕೆ ಆನೆಯ ‘ಮೈ ಕೊಡು’, ನುಸುಳಲಿಕ್ಕೆ ನುಸಿಯ >> ‘ಶರೀರ ಕೊಡು’ ಅಂದರೆ ಹೇಗಾದೀತು? ಎಲ್ಲರಿಗೆ ಎಲ್ಲವೂ ಬೇಕಾದರೆ ಅವನು ಕೊಡುವುದಾವುದು >> ಎಲ್ಲಿಂದ? ಅವನೇ ನಮ್ಮನ್ನು ಹುಟ್ಟಿಸಿದ್ದಾನೆ ಎಂತ ತಿಳಿಯುವುದಾದರೆ, ಕೊಡುವಷ್ಟನ್ನು >> ಕೊಟ್ಟೀ ಹುಟ್ಟಿಸಿದ್ದಾನೆ – ಎಂತ ತಿಳಿಯಬೇಕು.” >> >> “ಹೆಂಡತಿ ಮಕ್ಕಳನ್ನು ಬಿಟ್ಟರು ದಾಸರು. ವಿಠಲನನ್ನು, ನಾರಾಯಣನನ್ನು ನಂಬಿ ಹಾಡಿದರು. >> ನಂಬಿದ್ದೆ ನಂಬಿದ್ದು ಹಾಡಿದ್ದೆ ಹಾಡಿದ್ದು .ಅವರು ತಮ್ಮ ಹೆಂಡಿರನ್ನು ದಾರಿ ಮೇಲೆ ಕೆಡೆದು >> ಹೋದದ್ದು ನಿಜ. ಹಾಗೆ ಮಾಡಿ ಬೇಡಿದ್ದು ಯಾರನ್ನು?ತಂತಮ್ಮ ಹೆಂಡಿರೊಡನೆ ಸುಖವಾಗಿ >> ವೈಕುಂಠದಲ್ಲೋ, ಕೈಲಾಸದಲ್ಲೋ ಇರುವಂಥ ವಿಷ್ಣುವನ್ನು ,ಶಿವನನ್ನು. ಅವರೇನು ಕೊಟ್ಟಾರು? >> ಅವರಿಗೂ ಅವರ ಹೆಂಡಂದಿರಿಂದ ಮುಕ್ತಿ ಸಿಗದೇ ಇರುವಾಗ ?” >> >> “ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ ಒಂದು ದೇವರನ್ನು ಮಾಡಿಕೊಂಡಿದ್ದಾರೆ. ಅವನೇನು >> ಮಾಡುತ್ತಿದ್ದಾನೋ? ಯಾರ್ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರ್ಯಾರು ನಂಬುವುದಿಲ್ಲ ಎಂದು >> ಹುಡುಕಿ ಹೋಗಲಾರ . ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ >> ಇರಿಸಿದ್ದಾನಲ್ಲ. ಅವನನ್ನು ತಿಳಿಯಬೇಕಾದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು >> ಹುಡುಕಿಕೊಂಡು ಬರಬೇಕಾದುದು ಇಲ್ಲ . ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ. ನಾವೇ ಅವಕ್ಕೆ >> ಉತ್ತರವನ್ನು ಹೇಳಿಕೊಳ್ಳುತ್ತೇವೆ. ನಮಗೆ ಇಷ್ಟ ಕಂಡಂತೆ ನಡೆದಾಗ ದೇವರ ಇಚ್ಛೆ ಅನ್ನುತ್ತೇವೆ >> . ಅನಿಷ್ಟ ಪ್ರಾಪ್ತಿಸಿದಾಗ ಅನಿಷ್ಟ ಎನ್ನುತ್ತೇವೆ. ದೇವರು (?) ಕೊಟ್ಟ ಆಯುಷ್ಯವನ್ನು >> ಇದ್ದಷ್ಟು ಕಾಲ ಉಳಿದ ಮಕ್ಕಳ ಜೊತೆ ಬಾಳಿ ಬದುಕುವುದೇ ಪೂಜೆ ಎಂಬ ಬುಧ್ಧಿ ಯಾಕೆ ಬರಬಾರದು >> ನಮಗೆ?” >> >> “ಅರ್ಜುನನಿಗೆ ಕೃಷ್ಣ ಪರಮಾತ್ಮ ಅಷ್ಟು ದೊಡ್ಡ ಭಗವದ್ಗೀತೆ ಹೇಳಿದ ಅನ್ನುತ್ತಾರೆ; >> ಹೇಳಿದ್ದೆಲ್ಲಿ? ಕುರುಕ್ಷೇತ್ರದಲ್ಲಿ; ಧರ್ಮರಾಜ, ಕೌರವ, ಯುಯುಧಾನ, ಸಾತ್ಯಕಿಗಳು ಅವರವರ >> ಶಂಖಗಳನ್ನು ಅವರವರು ಊದಿದ ಮೇಲೆ ಇನ್ನೇನು? ಯುಧ್ಧ ತೊಡಗಿತು ಅನ್ನುವಾಗ ಅಲ್ಲಿ ಕೃಷ್ಣ ಮೂರು >> ದಿನಗಳ ಹರಿಕಥೆಯನ್ನು ಒಬ್ಬ ಅರ್ಜುನನ ಮುಂದೆ ನಡೆಸಿದ ಅಂದರೆ ಆಗ ಉಳಿದವರೆಲ್ಲರೂ ಏನು >> ಮಾಡಿದರೋ? ಯುಧ್ಧವನ್ನು ಬಿಟ್ಟು ಮನೆಗೆ ಹೋಗಿ, ತಿರುಗಿ ಅಲ್ಲೆಗೆ ಬಂದರೋ?” >> >> “ನಮ್ಮ ಹಾಗೆಯೇ ಸಾವಿರ, ಸಾವಿರ ಅಲ್ಲ, ಕೋಟಿ, ಕೋಟಿ ಪ್ರಾಣಿಗಳಿವೆ. ಅವು ಯಾವುದಾದರೂ, >> ಯಾರನ್ನಾದರೂ ಬೇಡುವುದನ್ನು ಕಂಡಿದ್ದೀಯಾ? ಮತ್ತೆಲ್ಲ ಬಿಡು- ಅವು ತಮ್ಮ ಅನ್ನವನ್ನು >> ಬೇಡುವುದಿಲ್ಲ; ಮಲಗಲು ತಾವನ್ನೂ ಬೇಡುವುದಿಲ್ಲ; ಹುಲ್ಲೆಯೆದುರಿಗೆ ಹುಲಿ ಬಂದರೆ ‘ಸಹಾಯ >> ಮಾಡು’ ಎಂತಲೂ ಬೇಡುವುದಿಲ್ಲ. ಬುದ್ಧಿ ಬಂದ ಮನುಷ್ಯ ಅದಕ್ಕಿಂತಲೂ ಕಳಪೆಯಾದರೆ ಹೇಗೆ?” >> >> ಸಾವನ್ನು ವಾಸ್ತವಿಕ ನೆಲೆಯಲ್ಲಿಯೇ ಕಾಣುವ ದಿಟ್ಟೆ. ಸುಬ್ರಾಯನ ತಂದೆ ಸತ್ತ ಸಂದರ್ಭದಲ್ಲಿ >> ಅಳುತ್ತಿದ್ದ ಸುಬ್ರಾಯನಿಗೆ ಅವರು ಹೇಳುವ ಮಾತುಗಳು, “ಇದೇ ಏನು ನಿನ್ನ ಗಂಡಸುತನ ? ನೀನೇನು >> ನಾನೇನು, ಯಾರೇನು? ಯಾರು ಶಾಶ್ವತ? ಹೋಗಿ ಕೊಳ್ಳಿ ಇಟ್ಟು ಉರಿಸಿ ಬಾ. ಇದೆಲ್ಲ ಒಂದು ಆಟ. >> ಕನಸು ಅಂದರೆ ಕನಸು. ನಾವು ಕಟ್ಟಿಕೊಂಡ ಹಾಗಿರುತ್ತದೆ ಕನಸು. ಒಳ್ಳೆಯದು ಎ0ದರೆ ಒಳ್ಳೆಯದು. >> ಕೆಟ್ಟದು ಅಂದರೆ ಕೆಟ್ಟದು. ಇದು ಭ್ರಮೆ ಎಂದರೆ ಭ್ರಮೆ. ನಿಜ ಅಂದರೆ ನಿಜ. .. ನಿನಗೆ >> ಹೇಳುತ್ತೇನೆ. ನಮಗೆ ಕನಸು ಗಿನಸು ಎಂಬುದಿರುವಾತನಕವೂ ಅದು ಅಷ್ಟೇ ನಿಜ. ಸಂಸಾರವೂ ಹಾಗೆಯೇ. >> ಸುಖ ದುಖಃಗಳೂ ಹಾಗೆಯೇ. ದೇವರೂ ಹಾಗೆಯೇ ದಿಂಡರೂ ಹಾಗೆಯೇ. ಅವು ಎಲ್ಲವೂ ನಾವು ಕಟ್ಟಿಕೊಂಡ >> ಹಾಗೆ. ಗಟ್ಟಿ ಮಾಡಿಕೋ ಮನಸ್ಸು” >> >> ಈ ರೀತಿಯಾಗಿ ಅಜ್ಜಿಯಾಡುವ ಮಾರ್ಮಿಕ, ಅರ್ಥಪೂರ್ಣ ಮಾತುಗಳನ್ನು ಹೇಳುತ್ತ ಹೋದರೆ ಅದಕ್ಕೆ >> ಕೊನೆ ಮೊದಲಿಲ್ಲ. ಅದಕ್ಕೆ ನೀವು ಕಾದಂಬರಿಯನ್ನೇ ಓದಬೇಕು. ಪ್ರತಿ ಮಾತು, ಹೇಳಿಕೆಗಳೂ >> ಓದುವವನ ಮನದಲ್ಲಿ ಅಚ್ಚೊತ್ತುವಂತವೇ. ಕಾದಂಬರಿ ಓದಿ ಮುಗಿಸುವಷ್ಟರಲ್ಲಿ ಒಂದು ಮಾತಂತೂ >> ಸ್ಪಷ್ಟವಾಗುತ್ತದೆ. ಜಿ. ಶಿವರುದ್ರಪ್ಪರವರು ಹೇಳಿರುವಂತೆ; ಕಾರಂತರು, ಯಾರೋ ಸಿದ್ಧಪಡಿಸಿ >> ಇರಿಸಿದ ತೀರ್ಮಾನಗಳಿಂದ ಬದುಕನ್ನು ಒಪ್ಪಿಕೊಳ್ಳುವವರೋ ಅಥವಾ ಯಾವುದೋ ಸಾಮಾಜಿಕ >> ಕಟ್ಟುಪಾಡುಗಳಿಗೆ ಒಳಗಾದವೊರೊ ಅಲ್ಲ. ಅವರೊಬ್ಬ ವಿಚಾರವಾದಿ, ದಾರ್ಶನಿಕ. ಕಾರಂತರು ಬದುಕಿನ >> ಸಮಸ್ತ ಅನುಭವಗಳಿಗೆ ತಮ್ಮನ್ನು ಒಡ್ಡಿಕೊಂಡವರು. ಅದರ ಸಂಘರ್ಷಗಳಿಂದ ಬೆಳೆದವರು. ಅದರ >> ವಾಸ್ತವಿಕ ಅನುಭವವೇ ಅವರ ಪಾಲಿಗೆ ಒಂದು ಪುಸ್ತಕ. ಅತ್ಯಂತ ಪ್ರಾಮಾಣಿಕತೆಯಿಂದ, >> ತೀವ್ರತೆಯಿಂದ ಬದುಕಿನೊಂದಿಗೆ ತಮ್ಮನ್ನು ತೊಡಗಿಸಿಕೊಂಡವರು ಅವರು. ಈ ವಾಸ್ತವದ ನೆಲೆಯಮೇಲೆ >> ಗಟ್ಟಿಯಾಗಿ ನಿಂತು, ಅದರೊಳಗಿನ ಹಾಗೂ ಅದರಾಚೆಯ ಗೂಢವನ್ನು ಅತ್ಯಂತ ಆಳವಾಗಿ >> ಅನ್ವೇಷಿಸಿದವರು. ಸರ್ವಕಾಲಕ್ಕೂ ಸಲ್ಲುವ ಸದ್ವಿಚಾರ ತುಂಬಿರುವ ಈ ಕಾದಂಬರಿ ಪ್ರತಿಯೊಬ್ಬರೂ >> ಓದಲೇ ಬೇಕಾದ ಕೃತಿ. >> >> – ಆದರ್ಶ ಕೃಷ್ಣಭಟ್ >> >> ೩. ಮೂಕಜ್ಜಿಯ ಕನಸುಗಳು (೧೯೬೮) >> Mookajjiya Kanasugalu – Dr. K. Shivarama Karantha >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to kannadastf+unsubscr...@googlegroups.com. >> To post to this group, send email to kannadastf@googlegroups.com. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.