danyavad
On 1/18/16, shankar Chawoor <bhimashankarchaw...@gmail.com> wrote: > ಹೊಸ ಹೆಜ್ಜೆ > ಪರಿಶುದ್ಧತೆ, ತಾಳ್ಮೆ , ಸತತ ಪ್ರಯತ್ನ ಇವುಗಳನ್ನು ಹೊಂದಿರುವವರಿಗೆ ಯಾವುದೂ ಅಸಾಧ್ಯವಲ್ಲ > > ಜನಪದ ಒಗಟುಗಳು > ೧. “ ಕೈಯುಂಟು ಕಾಲಿಲ್ಲ ಶಿರಹರಿದ ಮುಂಡ > ಮೈಯೊಳಗೆ ನವಗಾಯ ಒಂಬತ್ತು ತುಂಡ > ಒಯನೊಯ್ಯನೇ ಬಂದು ಹೆಗಲೇರಿಕೊಂಡ > ರಾಯರಾಯರಿಗೆಲ್ಲ ತಾನೇ ಪ್ರಚಂಡ ಉತ್ತರ: ಅಂಗಿ > ಮೊದಲನೆಯ ಒಗಟಿನ ಉತ್ತರ ಅಂಗಿ. ಅಂಗಿಯ ತೋಳುಗಳ ಭಾಗವನ್ನು ಕೈ ಎಂದಿದ್ದಾರೆ.ಅಂಗಿಯನ್ನು > ಕಾಲಿನ ಭಾಗಕ್ಕೆ ಹಾಗೂ ತಲೆಯ ಭಾಗಕ್ಕೆ ತೊಡುವುದಿಲ್ಲವಾದ್ದರಿಂದ "ಕಾಲಿಲ್ಲ" ಶಿರಹರಿದ" > ಪದವನ್ನು ಬಳಸಿದ್ದಾರೆ.ಬಟ್ಟೆಯ ಬೇರೆ ಬೇರೆ ಭಾಗ ಸೇರಿಸಿ ಹೊಲಿಗೆ ಹಾಕುವದನ್ನೇ 'ನವ ಗಾಯ ' > ಎಂದಿದ್ದಾರೆ, .ಹಾಗೆಯೇ ರಾಜಮಹಾರಾಜರಿಗೆಲ್ಲರಿಗೂ ಉಡುಗೆಯಾಗಿರುವ ಅಂಗಿ ಪ್ರಚಂಡವಾಗಿದೆ. > > ೨. “ಅಂಗೈ ಕೊಟ್ಟರೆ ಮುಂಗೈಯ ನುಂಗುವುದು > ಸಿಂಗಳುಕನಲ್ಲ ಶಿವಬಲ್ಲ ಬೆಡಗೀನ > ಜಾಣೆ ಕನ್ನಡವ ತಿಳಿದ್ಹೇಳೆ" ಉತ್ತರ: ಕುಪ್ಪಸ > ಕುಪ್ಪಸವು ಅಂಗೈಯನ್ನು ತೂರಿಸಿಕೊಂಡು ಮುಂಗೈ ಮೂಲಕ ಶರೀರದಲ್ಲಿ ಕೂರುತ್ತದೆ. ಆದ್ದರಿಂದ ಇದು > ಸಿಂಗಳೀಕನಾಗದೆ ಕುಪ್ಪಸವಾಗಿದೆ. > > ೩. “ನೀರಲ್ಲೆ ಹುಟ್ಟೋದು ನೀರಲ್ಲೆ ಬೆಳಿಯೋದು > ನೀರು ತಾಕಿದರೆ ಮಟಮಾಯ ಕನ್ನಡದ > ಬೆಡಗೀನ ಜಾಣೆ ತಿಳಿದ್ಹೇಳೆ" ಉತ್ತರ: ಉಪ್ಪು > ಉಪ್ಪನ್ನು ನೀರಿನಿಂದಲೇ ತಯಾರಿಸುತ್ತಾರೆ.ನೀರಿನಲ್ಲಿ ಹುಟ್ಟಿದ ಉಪ್ಪು,ನೀರಲ್ಲಿ ಕರಗಿ > ಹೋಗುತ್ತದೆ.ಆದ್ದರಿಂದ ಈ ಒಗಟಿನ ಉತ್ತರ ಉಪ್ಪು. > > ೪. “ಹಿತ್ಲಲ್ಲಿ ಹುಟ್ಟೋದು ಹೊತ್ತು ನೀರ ಹುಯ್ಯೋದು > ಅದು ಒಂದು ಗಿಡದ ಪರಿಕಾರ – ಎಲೆಬಾಲೆ > ಬಾಲೆ ನಮ್ಮರ್ಥ ಒಡೆದ್ಹೇಳೆ " ಉತ್ತರ : ಹಿತ್ಲವರೆ > ಅವರೆಯನ್ನು ಹಿತ್ತಲಿನಲ್ಲಿ ಬೆಳೆಸುತ್ತಾರೆ.ಹೊತ್ತು ಹೊತ್ತಿಗೆ ಇದಕ್ಕೆ ನೀರು ಹಾಕಿ > ಬೆಳೆಸುತ್ತಿದ್ದರು.ಆದ್ದರಿಂದ ಈ ಒಗಟಿನ ಉತ್ತರ ಹಿತ್ಲವರೆ.(ಇಲ್ಲಿ ಹೊತ್ತು ನೇರ ಹುಯ್ಯೋದು > ಎಂಬುದನ್ನು ನೀರನ್ನು ಹೊತ್ಕೊಂಡು ಹಾಕುತ್ತಾರೆ ಎಂದೂ ಅರ್ಥೈಸಬಹುದು)ಪರಿಕಾರ= ಪ್ರಕಾರ > > ೫. “ ಕೆಸರಲ್ಲಿ ಹುಟ್ಟೋದು ಕೆಸರಲ್ಲಿ ಬೆಳೆಯೋದು > ಅದು ಒಂದು ಗಿಡದ ಪರಿಕಾರ - ಎಲೆಬಾಲೆ > ಬಾಲೆ ನಮ್ಮರ್ಥ ಒಡೆದ್ಹೇಳೆ" ಉತ್ತರ : ತಾವರೆ ಬೇರು > ತಾವರೆಯು ಕೆಸರಿನಲ್ಲಿ ಹುಟ್ಟಿ ,ಕೆಸರಿನಲ್ಲಿ ಬೆಳೆಯುತ್ತದೆ. ಆದ್ದರಿಂದ ಈ ಒಗಟಿನ ಉತ್ತರ > ತಾವರೆ ಬೇರು. > > ೬. “ಬದಿಯಲ್ಲಿ ಹುಟ್ಟೋದು ಬದಿಯಲ್ಲಿ ಬೆಳೆಯೋದು > ಹೋಗೋರ ಮುಂಜೆರಗ ಹಿಡಿಯೋದು -ಎಲೆಬಾಲೆ > ಬಾಲೆ ನಮ್ಮರ್ಥ ಒಡೆದ್ಹೇಳೆ" ಉತ್ತರ : ಉತ್ತರಾಣಿ ಗಿಡ > ಉತ್ತರಾಣಿ ಗಿಡವು ದಾರಿಯ ಬದಿಯಲ್ಲಿ ಹುಟ್ಟುತ್ತದೆ.ಹಾದಿ ಬದಿಯಲ್ಲಿ ಹುಟ್ಟುವ ಇದು > ನಡೆದಾಡುವ ಹೆಂಗಸರ ಸೆರಗನ್ನು ಹಿಡಿಯುತ್ತದೆ.ಆದ್ದರಿಂದ ಈ ಒಗಟಿಗೆ ಉತ್ತರ ಉತ್ತರಾಣಿ ಗಿಡ. > > ೭. “ಹೊಲದಲ್ಲಿ ಹುಟ್ಟೋದು ಹೊಲದಲ್ಲಿ ಬೆಳೆಯೋದು > ಉಳುವಾನ ಕಂಡು ನಗುವುದು - ಎಲೆಬಾಲೆ > ಬಾಲೆ ನಮ್ಮರ್ಥ ಒಡೆದ್ಹೇಳೆ" ಉತ್ತರ : ಗರಿಕೆ ಹುಲ್ಲು > ಹೊಲದ ಬದುಗಳಲ್ಲಿ ಹುಟ್ಟಿ ಬೆಳೆಯುವ ಗರಿಕೆ ಹುಲ್ಲು ರೈತರಿಗೆ ಹಲವು ಬಗೆಗಳಲ್ಲಿ > ಉಪಯುಕ್ತವಾದುದು. ಅದ್ದರಿಂದ ಈ ಒಗಟಿನ ಉತ್ತರ ಗರಿಕೆ ಹುಲ್ಲು. > > ೮. “ಕಲ್ಲಲ್ ಕುಕ್ಕೂದಲ್ಲ ನೀರಲ್ ಸೆಳೆವುದಲ್ಲ > ಎಲ್ಲೆಲ್ಲೂ ಕಂಡ್ರೂ ಮಡಿವಸ್ತ್ರ - ಅಂಬಲ್ ಹಾಡು > ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ಕೊಕ್ನ್ಹಕ್ಕಿ (ಕೊಕ್ಕನ್ ಹಕ್ಕಿ) > ಈ ಒಗಟಿನಲ್ಲಿ ಬಟ್ಟೆ ಒಗೆಯುವ ಪ್ರಕ್ರಿಯೆಯನ್ನು ಹೇಳುತ್ತಿದ್ದಾರೆ .ಬಟ್ಟೆಯನ್ನು > ಶುಭ್ರಗೊಳಿಸಲು ನಾವು ಕಲ್ಲಿನಲ್ಲಿ ಕುಕ್ಕುತ್ತೇವೆ. ಅನಂತರ ನೀರಿನಲ್ಲಿ ಸೆಳೆಯುತ್ತೇವೆ. > ಆದರೆ ಕೊಕ್ಕರೆ ಕಲ್ಲಲ್ಲಿ ಕುಕ್ಕದೆ,ನೀರಿನಲ್ಲಿ ಸೆಳೆಯದೆ ಮಡಿವಸ್ತ್ರದಂತೆ ಶುಭ್ರವಾಗಿ > ಕಾಣುತ್ತದೆ.ಕೊಕ್ಕರೆಯು ಹಿಂಡು ಹಿಂಡಾಗಿಯೇ ಇರುವುದರಿಂದ 'ಎಲ್ಲೆಲ್ಲೂ ಕಂಡ್ರೂ' ಪದವನ್ನು > ಬಳಸಿದ್ದಾರೆ. > ಕರಾವಳಿಯ ಕುಂದಾಪುರ ಭಾಗಗಳಲ್ಲಿ ಕೊಕ್ಕರೆಗೆ ಕೊಕ್ಹ್ನಕ್ಕಿ (ಕೊಕ್ಕನ್ ಹಕ್ಕಿ)ಎಂದೇ > ಕರೆಯುತ್ತಾರೆ. > > ೯. “ತಂದೀ ಮದಿಗ್ಹೋಪ್ದಲ್ಲ ತಾಯ್ಮನಿಗೆ ಹೋಪ್ದಲ್ಲ > ಮುಂದದು ಧಾರಿ ಮೂರುತಕ - ಅಂಬಲ್ ಹಾಡು > ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ಸಂಪಿಗೆ ಹೂವು > ಸಂಪಿಗೆ ಎಂದರೆ ಇಲ್ಲಿ "ನಾಗ ಸಂಪಿಗೆ "ಎಂದು ಅರ್ಥೈಸಿಕೊಳ್ಳಬೇಕು. ಈ ನಾಗ ಸಂಪಿಗೆಯನ್ನು > ಶುಭಕಾರ್ಯಗಳಿಗೆ ಬಳಸುವುದಿಲ್ಲ. ಏಕೆಂದರೆ ಈ ಹೂವಿನ ಮಧ್ಯದಲ್ಲಿ ಹಾವಿನ ಹೆಡೆಯ ಆಕಾರದ ಎಸಳು > ಇರುತ್ತದೆ. ಆದ್ದರಿಂದ ಇದನ್ನು ತಂದೆ, ಮದುವೆಗೆ ಒಯ್ಯುವದಿಲ್ಲ &ತಾಯಿ ಮನೆಗೆ ಒಯ್ಯುವದಿಲ್ಲ > ಅಥವಾ ತಾಯಿ ಮನೆಗೆ ಆ ಹೂವನ್ನು ತೆಗೆದುಕೊಂಡು ಬರಲು ಒಪ್ಪುವುದಿಲ್ಲ .ಮುಂದದು ಧಾರಿ ಮೂರುತಕ > ಅಂದರೆ ಮೋಕ್ಷವನ್ನು ಪಡೆಯುವ ಶುಭ ಮಾರ್ಗಎಂದು ಅರ್ಥ. ಈ ಹೂವನ್ನು ಮೋಕ್ಷ ಮಾರ್ಗದಾತನಾದ > ಶಿವನ ಪೂಜೆಗೆ ಮಾತ್ರ ಬಳಸುವರು .(ಕೃಪೆ: ಕನ್ನಡ ಎಸ್.ಟಿ.ಎಫ್) > > ೧೦. “ದರಿಯ ಮ್ಯಾಲ್ ಹುಟ್ಟುವುದು ದೊರಿಯಾಗಿ ಬೆಳೆವುದು > ಅರಮನೆಗುತ್ತರವ ಕೊಡುವುದು - ಅಂಬಲ್ ಹಾಡು > ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ಹನಿಮರ (ತಾಳೆ ಮರ) > ತಾಳೆ ಮರವು ಸಾಮಾನ್ಯವಾಗಿ ಬೇಲಿ ಮೇಲೆ ಹುಟ್ಟುತ್ತದೆ .ನೇರವಾಗಿ(ತಲೆಎತ್ತಿ)ಎತ್ತರವಾಗಿ > ಬೆಳೆಯುವುದರಿಂದ ದೊರೆಯಂತೆ ಬೆಳೆಯುವುದು ಎಂದಿದ್ದಾರೆ.ತಾಳೆ ಮರದ ಗರಿಯನ್ನು ಅರಮನೆಗಳಲ್ಲಿ > ಪತ್ರವ್ಯವಹಾರಕ್ಕೆ ಬಳಸುತ್ತಾರೆ(ತಾಳೆಗರಿ).ಈ ಒಗಟಿನಲ್ಲಿ ದರಿ ಎಂದರೆ ಮಣ್ಣಿನಿಂದ > ನಿರ್ಮಿಸಿದ ಬೇಲಿ(ಕಾಪೌಂಡ್ ರೀತಿಯ ರಚನೆ) ಎಂದು ಅರ್ಥ.ಕುಂದಾಪುರ ಕನ್ನಡದಲ್ಲಿ ಬೇಲಿಗೆ ದರೆ > ಎಂದು ಕರೆಯುವುದು ರೂಢಿ. (ಉಚ್ಛಾರಣೆ-ಧರೆ>ದರೆ>ದರಿ) > > ೧೧. ಹಸಿಹಸಿಯ ಬೀಳೆ ಮಸಿಯ ಬಣ್ಣದ ಬೀಳೆ > ಬಿಸಿನೀರ ಹಾಕಿ ಸಲಗುವಿ - ಅಂಬಲ್ ಹಾಡು > ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ತಲೆಕೂದಲು > ತಲೆಕೂದಲು ಹಸಿಹಸಿಯಾಗಿರುವ(ಜೀವಂತವಾಗಿರುವ, ಕೂದಲು ಬೆಳೆಯುತ್ತಿರುವುದರಿಂದ) > ಕಪ್ಪು(ಮಸಿ)ಬಣ್ಣದ ಬಳ್ಳಿಯಂತಿರುತ್ತದೆ.ತಲೆಕೂದಲನ್ನು ಬಿಸಿನೀರು ಹಾಕಿ > ಸಲಹುತ್ತೇವೆ.(ಪೋಷಿಸುತ್ತೇವೆ) ಆದ್ದರಿಂದ ಈ ಒಗಟಿನ ಉತ್ತರ ತಲೆಕೂದಲು (ಬೀಳು=ಬಳ್ಳಿ ,ಲತೆ > ) > > ೧೨. “ಬಗಲಲ್ಲಿ ಕುಕ್ಕುವುದು ಬಾಯಲ್ಲಿ ತಿಂಬೂದು > ನಂಗ್ಹೇಳಿ ಅರ್ತು ಈ ಹಾಡಿನ - ಹೇಳ್ದಿರೆ > ಕೈಗೆ ಹಲ್ ಮುರ್ದು ಕೊಡುವೆನು ಉತ್ತರ : ಬೀಸುಕಲ್ಲು > ಬೀಸುಕಲ್ಲಿನಲ್ಲಿ ಕಾಳುಗಳನ್ನು ನೆತ್ತಿಯ ಮ > On 13-Jan-2016 1:16 pm, "Mamata Bhagwat1" <mamatabhagw...@gmail.com> wrote: > >> Facebook ನಲ್ಲಿ ಕನ್ನಡ ಸಂಪದ ತಾಣದಿಂದ ಹಂಚಿಕೆಯಾದ ಶ್ರೀನಿವಾಸ ಹಾವನೂರ್ ಕುರಿತಾದ >> ಮಾಹಿತಿ. >> >> ಕನ್ನಡದ ಪ್ರಸಿದ್ಧ ವಿದ್ವಾಂಸ ಮತ್ತು ಸಂಶೋಧಕರಾದ ದಿವಂಗತ ಶ್ರೀನಿವಾಸ ಹಾವನೂರ್ ಅವರು >> ಹಾವೇರಿ ಜಿಲ್ಲೆಯ ಹಾವನೂರಿನಲ್ಲಿ 1929ರ ಜನವರಿ 12ರಂದು ಜನಿಸಿದರು. >> >> ಹಾವೇರಿ, ಧಾರವಾಡ, ಸಾಂಗ್ಲಿಯಲ್ಲಿ ಶಿಕ್ಷಣ ಮುಗಿಸಿ ಕೆಲವು ಕಾಲ ಮಾರಾಟ ತೆರಿಗೆ ವಿಭಾಗದ >> ಅಧಿಕಾರಿಗಳಾಗಿದ್ದ ಶ್ರೀನಿವಾಸ ಹಾವನೂರರು ನಂತರ ಮುಂಬೈನ ಬಾಬಾ ಆಟೋಮಿಕ್ ರಿಸರ್ಚ್ >> ಸೆಂಟರ್ >> ನಲ್ಲಿ ಗ್ರಂಥಪಾಲಕರಾಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕನ್ನಡ ಎಂ. ಎ ಮತ್ತು >> ಪಿ.ಎಚ್.ಡಿ ಪಡೆದ ಅವರು ಕೆಲವು ವರ್ಷಗಳ ಕಾಲ ಮುಂಬೈ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ >> ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ನಂತರದ ಮೂರು ವರ್ಷಗಳಲ್ಲಿ ಮಂಗಳೂರಿನ ಬಾಸಿಲ್ >> ಮಿಷನ್ನಿನ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನಲ್ಲಿ ಕನ್ನಡ ನಿಘಂಟನ್ನು ಕನ್ನಡಕ್ಕೆ >> ಸಂಪಾದಿಸಿ ಕೊಟ್ಟ ರೆವರಂಡ್ ಕಿಟ್ಟೆಲ್ ಮುಂತಾದ ಮಹನೀಯರ ಕುರಿತು ವ್ಯಾಪಕ ಸಂಶೋಧನೆ >> ನಡೆಸಿದರು, ನಿವೃತ್ತಿಯ ನಂತರ ತಮ್ಮನ್ನು ಸಂಶೋಧನಾ ಬರವಣಿಗೆಗಳಲ್ಲಿ ತೊಡಗಿಸಿಕೊಂಡರು. >> >> ಕನ್ನಡ ಸಾಹಿತ್ಯ ಚರಿತ್ರೆಯ ಅರುಣೋದಯ ಕಾಲಘಟ್ಟವನ್ನು ಹೊಸ ದೃಷ್ಟಿಕೋನದಿಂದ >> ನೋಡುವುದಕ್ಕೆ, >> ಆಮೂಲಾಗ್ರವಾಗಿ ಸಂಶೋಧಿಸಿ ಅಗತ್ಯವಾದ ಆಧಾರಗಳನ್ನು ಒದಗಿಸುವುದಕ್ಕೆ ಮತ್ತು ಹೆಚ್ಚಿನ >> ಆಧಾರಗಳು ಬೇಕೆನಿಸಿದಾಗ ಅವುಗಳ ಬೆನ್ನುಹತ್ತಿ ದೇಶ ವಿದೇಶಗಳಿಗೆ ಸಂಚರಿಸುವುದಕ್ಕೆ ಡಾ. >> ಶ್ರೀನಿವಾಸ ಹಾವನೂರರಿಗೆ ಸಾಧ್ಯವಾದುದು ಅವರ ಅಸಾಧಾರಣ ತಾಳ್ಮೆ, ಚಿಕಿತ್ಸಕ ದೃಷ್ಟಿಕೋನ. >> ಅವರದು ದಣಿವರಿಯದ ದುಡಿಮೆ ಹಾಗೂ ಬತ್ತದ ಜ್ಞಾನದಾಹ ಎಂದು ಕನ್ನಡ ವಿದ್ವಾಂಸರ ಲೋಕದಲ್ಲಿ >> ಪ್ರಖ್ಯಾತರು. >> >> ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೊಟ್ಟಮೊದಲ ಬಾರಿಗೆ ಸಮಗ್ರವಾಗಿ ರೂಪಿಸಿದ ರಂ.ಶ್ರೀ. >> ಮುಗಳಿ ಅವರ ಮಾರ್ಗದರ್ಶನದಲ್ಲಿ ಹಾವನೂರರು ಸಲ್ಲಿಸಿದ ಪ್ರೌಢ ಪ್ರಬಂಧ ‘ಹೊಸಗನ್ನಡ >> ಅರುಣೋದಯ’. ಅದು ಎಲ್ಲ ಕಾಲದ ಸಾಹಿತ್ಯ ವ್ಯಾಸಂಗಿಗಳಿಗೆ ಮಹತ್ವದ ಆಕರ ಗ್ರಂಥ. >> ‘ಹೊಸಗನ್ನಡ >> ಅರುಣೋದಯ’ದ ಪಿಎಚ್ಡಿ ಪ್ರಬಂಧದ ಮೌಲ್ಯಮಾಪನ ನಡೆಸಿದ ಹಿರಿಯ ವಿದ್ವಾಂಸ ಡಾ. >> ಹಾ.ಮಾ.ನಾಯಕರು >> ಸಂದರ್ಶನವನ್ನು ಮಾಡದೆಯೇ ಪಿಎಚ್ಡಿ ನೀಡಬಹುದೆಂದು ಶಿಫಾರಸು ಮಾಡಿದ್ದರೆಂಬುದು ಹಾವನೂರರ >> ಸಂಶೋಧನಾ ವಿದ್ವತ್ತಿಗೆ ಸಾಕ್ಷಿ. 19ನೇ ಶತಮಾನದಲ್ಲಿ ಕಂಡ ಹೊಸಗನ್ನಡ ಸಾಹಿತ್ಯದ ಅರುಣೋದಯ >> ಕಾಲದ ಸಾಧನೆ, ಸಿದ್ಧಿ ಮತ್ತು ಲೋಪದೋಷಗಳನ್ನು ಅಭಿವ್ಯಕ್ತಿಸುವ ಈ ಕೃತಿಯ ಮೂಲಕ >> ದೊಡ್ಡದೊಂದು >> ನಿಧಿಯ ಬಾಗಿಲನ್ನು ಸಾಹಿತ್ಯಾಭ್ಯಾಸಿಗಳಿಗೆ ಹಾವನೂರರು ತೆರೆದಿಟ್ಟರು. >> >> ಹಾವನೂರರು ‘ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ’, ‘ಗೋವಿಂದ ಪೈ ವಾಙ್ಮಯ ಸಮೀಕ್ಷೆ’, >> ‘ಶ್ರೀವಾದಿರಾಜರ ತೀರ್ಥಪ್ರಬಂಧ’, ‘ಪ್ರೇಕ್ಷಣೀಯ ಕರ್ನಾಟಕ’, ‘ಗಳಗನಾಥ ಮಾಸ್ತರರು’, >> ‘ಒಂದಿಷ್ಟು ಲಘು, ಒಂದಿಷ್ಟು ಗಂಭೀರ’, ‘ಪಾ.ವೆಂ ಆಚಾರ್ಯರ ಸಮಗ್ರ ಕೃತಿಗಳ ಸಂಪಾದನೆ’. >> ‘ಹಟ್ಟಿಯಂಗಡಿ ನಾರಾಯಣರಾಯರ ಸಾಹಿತ್ಯವಾಚಿಕೆ’, ‘ಎಪಿಗ್ರಾಫಿಕಲ್ ಸ್ಟಡೀಸ್’, ‘ಮ.ಪ್ರ. >> ಪೂಜಾರರ ಹಳಗನ್ನಡ ಕವಿ ಕಾವ್ಯ ಮಹೋನ್ನತಿ’ ಮೊದಲಾಗಿ 60ಕ್ಕೂ ಹೆಚ್ಚು ಮೌಲಿಕ ಕೃತಿಗಳ >> ಲೇಖಕರು. >> >> ‘ಭೈರಪ್ಪನವರ ಕಾದಂ ಕಥನಗಳು’ ಹೊಸ ರೀತಿಯ ಬರವಣಿಗೆ. 40 ವರ್ಷಗಳಿಂದ ಕಿಟೆಲರ ಜೀವನ, >> ಸಾಧನೆಯ ಬಗ್ಗೆ ಬರೆಯುತ್ತ ಬಂದವರು ಅವರು. ಕಿಟೆಲ್ ಕುರಿತ ಕೃತಿ ಜರ್ಮನ್ ಭಾಷೆಯಲ್ಲಿಯೂ >> ಪ್ರಕಟವಾಗಿದೆ. ಹಾವನೂರರು ಬಾಸೆಲ್ ಮಿಷನ್ನಲ್ಲಿ ಹುದುಗಿದ್ದ ಕನ್ನಡ ಸಂಬಂಧಿ ಆಕರ >> ಸಾಮಗ್ರಿಯ ಅಧ್ಯಯನಕ್ಕಾಗಿ ನಾಲ್ಕು ಸಲ ಇಂಗ್ಲೆಂಡ್ ಮತ್ತು ಬಾಸೆಲ್ಗೆ ಭೇಟಿ ನೀಡಿದ್ದರು. >> >> ಹಾವನೂರರು ಕರ್ನಾಟಕದ ಇತಿಹಾಸ, ಸಾಹಿತ್ಯಗಳ ಸಂಶೋಧನೆಗಾಗಿ ಕಂಪ್ಯೂಟರ್ ಅನ್ನು >> ಬಳಸಿದವರಲ್ಲಿ ಮೊದಲಿಗರು, ‘ಮುದ್ದಣನ ಶಬ್ದ ಪ್ರತಿಭೆ’ ಅವರ ಮಾರ್ಗದರ್ಶನದಲ್ಲಿ >> ರೂಪುಗೊಂಡಿದ್ದ ಸಂಶೋಧನಾ ಪ್ರಬಂಧ. ಎರಡು ಇತಿಹಾಸ ಸಮ್ಮೇಳನಗಳಿಗೆ ಅಧ್ಯಕ್ಷರಾಗಿದ್ದರು. >> ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರತಿಷ್ಠಿತ >> ಗೌರವಗಳಿಗೆ ಭಾಜನರಾಗಿದ್ದರು. ವಿದ್ವತ್ತಿಗೆ ಸಂಬಂಧಿಸಿದಂತೆ ಎಲ್ಲ ವಯೋಮಾನದ >> ಲೇಖಕರೊಂದಿಗೆ >> ಆಪ್ತ ಸಂಬಂಧ ಇಟ್ಟುಕೊಂಡಿದ್ದರು. >> >> ಹದಿನಾಲ್ಕು ವಿವಿಧ ಪ್ರಕಾರಗಳಿಗೆ ಅವರ ಬರಹಗಳು ವಿಸ್ತರಿಸಿವೆ. ಸಣ್ಣ ಕತೆಗಳು, ಇತಿಹಾಸ >> ಸಂಶೋಧನೆ, ಸಾಮಾಜಿಕ ವಿಷಯಗಳು, ಕಾದಂ ಕಥನಗಳು, ಲಲಿತ ಪ್ರಬಂಧಗಳು, ಸಾಹಿತ್ಯಕ >> ವಿಶ್ಲೇಷಣೆ, >> ಕಂಪ್ಯೂಟರ್ ಕನ್ನಡ, ಸಂಶೋಧನಾ ಪ್ರಕ್ರಿಯೆ, ಪತ್ರಿಕೋದ್ಯಮ, ಗಣ್ಯವ್ಯಕ್ತಿಗಳು, ಧಾರ್ಮಿಕ >> ಹಾಗೂ ದಾಸ ಸಾಹಿತ್ಯ, ಕ್ರೈಸ್ತಸಾಹಿತ್ಯ, ಪುಸ್ತಕೋದ್ಯಮ, ಇಂಗ್ಲಿಷ್ ಬರಹಗಳು- ಹೀಗೆ ವಿಷಯ >> ವೈವಿಧ್ಯ ವಿಸ್ತಾರದ ಆಡುಂಬೊಲ ಅವರದು. ನಿಸ್ಸಂದೇಹವಾಗಿ ಹಾವನೂರರು ಕನ್ನಡದ ಅಪರೂಪದ >> ಸವ್ಯಸಾಚಿಗಳಾಗಿ ದೃಗ್ಗೋಚರವಾಗುತ್ತಾರೆ. 2010 ವರ್ಷದ ಏಪ್ರಿಲ್ ಮಾಸದಲ್ಲಿ ಶ್ರೀನಿವಾಸ >> ಹಾವನೂರರು ನಿಧನರಾದರು. ಅವರು ತಮ್ಮ ಕಾರ್ಯದಿಂದ ಅಮರರು. ಈ ಮಹಾನ್ ಚೇತನಕ್ಕೆ ನಮ್ಮ >> ನಮನಗಳು. >> >> ಆಧಾರ: ಪ್ರಜಾವಾಣಿಯಲ್ಲಿ ಪ್ರಕಟವಾದ ಲಕ್ಷ್ಮಣ ಕೊಡಸೆ ಅವರ ಲೇಖನ >> >> ಕೃಪೆ... ಕನ್ನಡ ಸಂಪದ >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to kannadastf+unsubscr...@googlegroups.com. >> To post to this group, send email to kannadastf@googlegroups.com. >> Visit this group at https://groups.google.com/group/kannadastf. >> To view this discussion on the web, visit >> https://groups.google.com/d/msgid/kannadastf/CAHVpsL6qSOyzKoEx31zFNbzEO8ncQiLukLi9gvT2g_%2BYtwvqkg%40mail.gmail.com >> <https://groups.google.com/d/msgid/kannadastf/CAHVpsL6qSOyzKoEx31zFNbzEO8ncQiLukLi9gvT2g_%2BYtwvqkg%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software ಸಾರ್ವಜನಿಕ > ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send an email to kannadastf@googlegroups.com. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAM8GxfZA%3D7-3zFuNJ7bSNz%2B_VrLXue3LEqn%2BTsJLb0TPx7aWhQ%40mail.gmail.com. > For more options, visit https://groups.google.com/d/optout. > -- paramanand galagali asst teacher g h s kankanawadi tq raibag 591220 mobil no 9986475696 -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAPW75S%2BHAHbhwSgraYz6TP74Bc1TNCjUVUkCjMVQHWT2xf%2B%3Dyg%40mail.gmail.com. For more options, visit https://groups.google.com/d/optout.