ಉಡುಪಿಯ ನ್ಯಾಯವಾದಿ ರಾಕೇಶ್ ಸರ್ ಬರೆಯುತ್ತಾರೆ. ಪ್ರೀತಿಯ ನನ್ನ ಮಂಗಳೂರಿನ ಗೆಳೆಯರೇ
ಸಾಕು... ಬುದ್ಧಿವಂತರ ಜಿಲ್ಲೆ ಅನಿಸಿಕೊಂಡ ನಮಗೆ ಇದು ಶೋಭೆಯಲ್ಲ..ರಾಜಕಾರಣಿಗಳ ಮಾತು ಕೇಳಿ ಕಚ್ಚಾಡುವುದನ್ನು ನಿಲ್ಲಿಸಿ..ಯಾವೊಬ್ಬ ರಾಜಕಾರಣಿನೂ ಬರಲ್ಲ ನಾಳೆ ನಮ್ಮ ನಿಮ್ಮ ಮನಯಲ್ಲೇನಾದರೂ ಸಂಭವಿಸಿದರೆ..ಆಗ ಇನ್ನೊಂದು ಧರ್ಮದ ನಮ್ಮ ನೆರೆಹೊರೆಯವರೇ ನಮಗೆ ಗತಿ...ನಾಳೆ ಸರ್ಕಾರ 5, 10 ಲಕ್ಷ ಪರಿಹಾರ ಕೊಟ್ಟು ಕೈ ತೊಳೆಯುತ್ತೆ.. ಆದರೆ ಒಂದು ಜೀವದ ಬೆಲೆ ಏನು ಅಂತ ಯಾರಿಗೂ ಗೊತ್ತಿಲ್ವಾ ? ಅಮಾಯಕರನ್ನು ಕೊಲ್ಲಲು ಯಾವ ರಾಮ ಕೃಷ್ಣ ಪೈಗಂಬರ ಏಸು ಬುದ್ದ ಗುರುನಾನಕ ನಾರಾಯಣಗುರು ಹೇಳಿದ್ದಾರೆ??? ಅಮಾಯಕನ ತಾಯಿಯ ಹೃದಯ ಚೂರುಚೂರಾಗುತ್ತದೆ. ತಾಯಿಯ ಕಣ್ಣೀರಿಗೆ ಹಿಂದೂ ಮುಸ್ಲಿಂ ಕ್ರೈಸ್ತ ಎಂಬ ಭೇದವಿಲ್ಲ. ತಾಯಿಯ ಶಾಪಕ್ಕೆ ಗುರಿಯಾಗದಿರಿ. ಇಹಲೋಕದಲ್ಲೇ ಸರ್ವನಾಶವಾಗುವಿರಿ... ಮಸೀದಿಯ ಮಿನಾರದಲ್ಲಿ ಗೂಡು ಕಟ್ಟಿದ ಪಾರಿವಾಳ ಮಂದಿರದಲ್ಲಿ ಧಾನ್ಯ ಕಾಳು ಹೆಕ್ಕಿ ತಿನ್ನುತ್ತಿತ್ತು ಮುಸ್ಲಿಮರು ತಿಂದು ಬಿಸಾಡಿದ ಮಾಂಸದ ಎಲುಬನ್ನು ತಿಂದ ಬೆಕ್ಕು ದೇವಸ್ಥಾನ ಪುರೋಹಿತರು ಕೊಟ್ಟ ಹಾಲನ್ನು ಕುಡಿಯುತ್ತಿತ್ತು ಮಂದಿರದ ಮಹಡಿಯಲಿ ಗೂಡುಕಟ್ಟಿದ ಗುಬ್ಬಚ್ಚಿ ಮಸೀದಿಯ ಬಾವಿಯ ನೀರು ಕುಡಿಯುತ್ತಿತ್ತು ಆದರೆ ಇವುಗಳಿಗೆ ಪರಸ್ಪರ ಸಂಬಂಧ ಇಲ್ಲವೆಂಬಂತೆ ಮಸೀದಿ-ಮಂದಿರಗಳ ಹೆಸರಲ್ಲಿ ಕಚ್ಚಾಡುತ್ತಿದ್ದಾನೆ ಮನುಜ ಪ್ರಾಣಿ-ಪಕ್ಷಿ ಗಳಿಗಿಲ್ಲದ ಕೋಮು ಬಣ್ಣವ ಕೊಟ್ಟವರಾರು ಈ ಮನುಷ್ಯ ಕುಲಕ್ಕೆ...? ಇವತ್ತು ಕರ್ನಾಟಕದಂತ್ಯ ಅದರಲ್ಲೂ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ ನೋಡಿದರೆ ಮನಸ್ಸಿಗೆ ತುಂಬಾ ನೋವುಂಟಗುತ್ತದೆ. ಕ್ರಿಶ್ಚಿಯನರು ಬೆಳೆದ ಹೂಗಳನ್ನ, ಮುಸ್ಲಿಂರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾ, ಹಿಂದೂಗಳು ತಗೊಂಡು ದೇವರ ಪೂಜೆಗೆ ಇಡುವಂತ ಹೊಂದಣಿಕೆಯ ಕೇಂದ್ರ ಬಿಂದುವಾಗಿತ್ತು ನಮ್ಮ ಮಂಗಳೂರು. ಆದರೆ ಇವತ್ತು ಯಾವುದೋ ನಾಲ್ಕು ಜನರ ವಿಕ್ರತ ಮನಸ್ಸುಗಳಿಂದಾಗಿ ಮಂಗಳೂರು ಗೊಂದಲದ ಗೂಡಗಿದೆ. ಫೇಸಬುಕ್, ವಾಟ್ಸಪಗಳಲ್ಲಿ ಗ್ರೂಪಗಳನ್ನ ರಚಿಸಿ ಕೋಮು ದ್ವೇಷದ ವಿಷ ಬೀಜ ಬಿತ್ತುವ ನಿಮ್ಮಗಳಲ್ಲಿ ನಾನು ಕೇಳ ಬಯಸುದು ಇಷ್ಟೇ , O-, AB- ರಕ್ತ ಬೇಕು ಅಂತ ಬಂದ ಮೆಸೇಜ್ಗಳಲ್ಲಿ ಯಾವತ್ತಾದರೂ ಮುಸ್ಲಿಂ ರಕ್ತನೇ ಬೇಕು ಇಲ್ಲಾ ಹಿಂದೂ ರಕ್ತವೇ ಬೇಕು ಅಂತ ಎಲ್ಲಿ ಆದರೂ ಮೆನಷನ್ ಮಾಡಿದ್ದು ಉಂಟಾ? ಜಹೀರ್ ಕಾನ್ ಜಾಸ್ತಿ ವಿಕೆಟ್ ತೆಗೆದು ಇಂಡಿಯಾ ಮ್ಯಾಚ್ ಗೆದ್ದಾಗ ದುಃಖಪಡುವ ಹಿಂದೂಗಳಿದ್ದಾರ ? ದ್ರಾವಿಡ ಸೆಂಚುರಿ ಹೊಡೆದು ಭಾರತ ಮ್ಯಾಚ್ ಸೋತಗ ಖುಷಿಪಟ್ಟ ಮುಸ್ಲಿಂ ಇದ್ದಿರಾ? ಹಿಂದೂ,ಮುಸ್ಲಿಂ ಅಂತ ಪ್ರತ್ಯೇಕ ಮಾಡಿ ಅಮೀರ ಕಾನ್,ಅಜೇಯ ದೆವಗಾನ್ ಫಿಲ್ಮ್ ನೋಡತ್ತಾ ಇದ್ದೀರಾ? ಹೀಗಿರುವಾಗ ಎಲ್ಲೊ ನಡೆದ ಯಾವುದೋ ಘಟನೆಯನ್ನು ನಿಮಗೆ ಬೇಕಾದ ಹಾಗೇ ಫೋಟೋಶಾಪ್ ಅಲ್ಲಿ edit ಮಾಡಿ ಪ್ರಚೋದನಕಾರಿ ಕಮೆಂಟಗಳನ್ನು ಹಾಕಿ ಪೋಸ್ಟ್ ಮಾಡುದು ಎಷ್ಟು ಸರಿ, ಇದರಿಂದ ನೀವು ಸಾಧಿಸಿದ್ದದರು ಏನು? ನಿಮ್ಗಳಿಂದಾಗಿಯೇ , ಇವತ್ತು ಬಂದರು,ವಿಮಾನ ನಿಲ್ದಾಣ, ಹೈಟೆಕ ಆಸ್ಪತ್ರೆಗಳು , ಇಂಜಿನಿಯರಿಂಗ್ ಕಾಲೇಜುಗಳು ಎಲ್ಲಾ ಇದ್ದು ಏನು ಇಲ್ಲದ ಸ್ಥಿತಿ ಮಂಗಳೂರಿಗೆ ಬಂದಿದೆ. ದಿನನಿತ್ಯ ನಡೆಯುವ ಗಲಾಟೆಗಳು ನ್ಯಾಶನಲ್ ನ್ಯೂಸ ಚಾನೆಲ್ಗಳಲ್ಲಿ ಹರಿದಾಡುವುದರಿಂದ ಇವತ್ತು ಮಂಗಳೂರಿಗೆ ಯಾವ ಕಂಪೆನಿಯು ಬರುತ್ತಿಲ್ಲ , ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಮಂಗಳೂರು ನಿರುದ್ಯೋಗದ ಬೀಡಾಗುದರಲ್ಲಿ ಸಂದೇಹವಿಲ್ಲ. Smart ಸಿಟಿ ಯೋಜನೆ ಕೂಡ ನಮ್ಮ ಕೈಜಾರಿ ಹೋಗುವ ಹಂತ ತಲುಪಿದೆ. ಇನ್ನು ನಾವು ಜಾಗ್ರತರಾಗದೆ ಇದ್ದರೆ ನಮ್ಮ ಕಾಲಿಗೆ ನಾವೇ ಕೊಡಲಿ ಏಟು ಹಾಕಿಕೊಂಡ ಅತಿ ಬುದ್ಧಿವಂತರಾಗಿ ಬಿಡುತ್ತೇವೆ. ನಾಳೆ ಮಂಗಳೂರಿಗೆ ಸುನಾಮಿ ಬಂದರೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅಂತ ಪರಿಭೇದ ಮಾಡಿ ತಗೊಂಡ ಹೋಗುತ್ತಾ? ಪ್ರಕ್ರತಿಗಿಲ್ಲದ ಧರ್ಮ ನಮಗೆ ಬೇಕಾ? ಒಮ್ಮೆ ಯೋಚಿಸಿ. ಮೊದಲು ಮನುಷ್ಯರಾಗಿ. ಸರಿ ಅನಿಸಿದರೆ ಶೇರ್ ಮಾಡಿ. ,ರಾಕೇಶ್ ನ್ಯಾಯವಾದಿ ಉಡುಪಿ ಸಮೀರ ( ಕನ್ನಡ ಭಾಷಾ ಶಿಕ್ಷಕಿ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAP9Vewp%2BDqgANodtZK%3DDKACVCLH4Sp1uXFwYc_ga8Q0wmCEJew%40mail.gmail.com. For more options, visit https://groups.google.com/d/optout.