Thumba chennagide sir.manushathwa andre ade reethi irabeku

2017-04-18 12:45 GMT+05:30 sathishahithashree <sathishahithash...@gmail.com>
:

> ನಾನು ಇವತ್ತು ಸಂಜೆ ನನ್ನ ಪರೀಕ್ಷೆ ಮುಗಿಸಿ ಬಸ್ಟಾಪಲ್ಲಿ ಬಸ್ಸಿಗೋಸ್ಕರ ಕಾಯ್ತಾ ಇದ್ದೆ
> ಯಾವುದೇ ಟೆನ್ಷನ್ ಬಸ್ ಬೇರೆ ಬಂದಿರಲಿಲ್ಲ
> ಅಷ್ಟರಲ್ಲಿ 12 ವರ್ಷದ ಬಾಲಕನೊಬ್ಬ ನನ್ನ ಹತ್ತಿರ ಬಂದು ಅಣ್ಅಣ್ 10 ರೂಪಾಯಿ ಇದ್ದರೆ ಕೊಡಿ
> ಅಂದ ನಾನು ಮೊದಲೇ ಯಾವುದೋ ಟೆನ್ಷನಲ್ಲಿದ್ದೆ ನಮ್ಮ ಹುಡುಗಿ ಬೆರೆ ನನ್ನ ಮೇಲೆ ಕೋಪ
> ಮಾಡ್ಕೊಂಡು ಬೆಳಿಗ್ಗೆಯಿಂದ ಫೋನ್ ತೆಗ್ದಿರಲಿಲ್ಲ ಈ ಹುಡುಗ ಕೇಳಿದ್ದು ನನಗೆ ರೇಗಿ ಹೊಯ್ತು
> ಕೋಪದಲ್ಲಿ ನನ್ನ ಹತ್ರ ಇಲ್ಲ ಹೋಗೊ ಅಂತ ಬೈದುಬಿಟ್ಟೆ. .
>
>          ಆಮೇಲೆ ಯಾಕೋ ಬೆಜಾರಾಗಿ ಆ ಹುಡುಗನ ಹಿಂದೆ ಹೋದೆ.
>
> ಅದೊಂದು ಆಸ್ಪತ್ರೆ ಅದರ ಒಂದು ಕಟ್ಟೆಯ ಮೇಲೆ ಗೋಣಿ ಚೀಲದ ಮೇಲೆ ಒಂದು ಹೆಂಗಸು ಮುದ್ದೆಯಾಗಿ
> ಮಲಗಿದ್ದಳು ಆ ಹುಡುಗ ಅವಳ ಹತ್ತಿರ ಹೋದವನೇ ತಲೆಗೆ ಕೈ ಹಚ್ಚಿಕೊಂಡು ಕೂತುಬಿಟ್ಟ. ...
>
>       ನನಗೆ ಕುತೂಹಲ ತಡೆಯದೆ ಆ ಹುಡುಗನ ಹತ್ತಿರ ಹೋದೆ...
>
> ನನ್ನ ಮತ್ತು ಬಾಲಕನ ಸಂಭಾಷಣೆ. ...
>
> ನಾನು - ಯಾಕೋ ಏನಾಯ್ತು ಇಲ್ಲಿ ಬಂದು  ಕೂತಿದಿಯಾ...? ಯಾರಿವರು. ...?
>
> ಬಾಲಕ - ಅಣ್ಣಾ ಇವರು ನಮ್ಮಮ್ಮ. .
>
> ನಾನು- ಏನಾಗಿದೆ ಇವರಿಗೆ....?
>
> ಬಾಲಕ-  ಗೊತ್ತಿಲ್ಲ ಅಣ್ಣಾ ಡಾಕ್ಟ್ರು ಹೇಳಿದ್ರು ಅದೇನೋ ಕುಷ್ಟ ರೋಗ ಅಂತೆ.
>
> ನಾನು - ಮತ್ತೆ ಅವರನ್ನ ಇಲ್ಲಿ ಮಲಗಿಸಿ ನಿನ್ ಭಿಕ್ಷೆ ಬೇಡ್ತಿದಿಯಾ....?
>
> ಬಾಲಕ - ಇಲ್ಲ ಅಣ್ಣಾ ನಾನು ಭಿಕ್ಷೆ ಬೇಡಲ್ಲ ದಿನಾ ಬೆಳಿಗ್ಗೆ ಅಂಗಡಿಗಳಿಗೆ ಹೂ ಹಾಕ್ತಿನಿ
>
> ನಾನು - ಮತ್ಯಾಕೆ ನನ್ನ ಹತ್ರ ದುಡ್ಡು ಕೆಳ್ದೆ. ..?
>
> ಬಾಲಕ - ಅಣ್ಣಾ ಅಮ್ಮನ್ನ ಆಸ್ಪತ್ರೆಗೆ ತೋರಿಸ್ದೆ ಮಾತ್ರೆ ತಗೋಳೊಕೆ 10 ರೂಪಾಯಿ ಕಡಿಮೆ
> ಇತ್ತು ಅಣ್ಣಾ
>
> ಇದನ್ನು ಕೇಳಿ ನನ್ನ ಕಣ್ಣಾಲಿಗೆ ಒದ್ದೆಯಾಯಿತು ಹೆತ್ತ ತಾಯಿಯನ್ನು ಬೀದಿಗ ತಳ್ಳುವ
> ಮಕ್ಕಳಿರುವ ಈ ಕಾಲದಲ್ಲಿ ಆ ಹುಡುಗನ ಮಾತು ನನ್ನಲ್ಲಿ ಸಂಚಲನ ಉಂಟು ಮಾಡಿತು. ..
>
> ನಾನು- ನಿಮ್ಮಪ್ಪ ಎಲ್ಲೋ ಮರಿ ...?
>
> ಬಾಲಕ - ನಂಗೆ ಅಪ್ಪ ಇಲ್ಲ ಅಣ್ಣಾ ಸತ್ತೊಗಿದಾರೆ. ...
>
> ನಾನು - ಶಾಲೆಗೆ ಹೋಗಲ್ವಾ ನೀನು.....?
>
> ಬಾಲಕ - ಹೋಗ್ತಿನಿ ಅಣ್ಣಾ ಬೆಳಿಗ್ಗೆ ಹೂ ಹಾಕಿ
> ಆಮೇಲೆ ಹೋಗ್ತಿನಿ
>
> ಆ ಹುಡುಗನ ಮಾತುಗಳು ನನ್ನ ಮೂಕವಿಸ್ಮತನನ್ನಾಗಿಸಿ ಬಿಟ್ಟಿದ್ದವು ಜೇಬೊಳಗೆ ಕೈ ಹಾಕಿ 100
> ರೂಪಾಯಿ ನೋಟೊಂದನ್ನು ಬಾಲಕನ ಕೈಗಿತ್ತೆ
>
> ಬಾಲಕ -ಬೇಡ ಅಣ್ಣಾ ನಂಗೆ ಬರೀ 10  ರೂಪಾಯಿ ಸಾಕು ಇವತ್ತು ನಾನು ದುಡ್ಡು ಸರಿಯಾಗೇ
> ತಂದಿದ್ದೆ ದಾರಿಯಲ್ಲಿ ಪಾಪ ಒಂದು ಅಜ್ಜಿ ಹಸಿವು ಅಂತ ಮಲ್ಕೊಂಡಿದ್ಲು ಅದಕ್ಕೆ ಅವಳಿಗೆ
> ತಿಂಡಿ ಕೊಡಸ್ದೆ ಕಡಿಮೆ ಬಿತ್ತು 10 ರೂಪಾಯಿ ಕೊಡಿ
>
> ಆ ಬಾಲಕ ಮಾತು ಒಮ್ಮೆ ನನ್ನ ಬಾಲ್ಯವನ್ನು ನೆನಪಿತು ನಾನು ಈ ವಯಸ್ಸಿನಲ್ಲಿ ನನಗೆ ಸೈಕಲ್
> ಬೇಕು ಎಂದು ಹಠ ಹಿಡಿದಾಗ ಅಪ್ಪ ತಮ್ಮ ಮದುವೆಯಲ್ಲಿ ಕೊಟ್ಟ ವಾಚನ್ನು ಮಾರಿ ನನಗೆ ಸೈಕಲ್
> ತಂದು ಕೊಟ್ಟರು
> ಅಷ್ಟೊತ್ತಿಗಾಗಲೇ ನನ್ನ ಕಣ್ಣಿಂದ ಹನಿಯೋಂದು ಜಾರಿ ಕಪಾಳ ಮಾರ್ಗವಾಗಿ ನೆಲ ಸೇರಿತ್ತು. ..
>
> ನಾನು -ಅಲ್ಲ ನಿಮ್ಮಮ್ಮನ ಆಸ್ಪತ್ರೆಗೆ ದುಡ್ಡು ಕಡಿಮೆ ಬಿಳುತ್ತೆ ಅಂತ ಗೊತ್ತಿದ್ರು
> ಅಜ್ಜಿಗೆ ಯಾಕೆ ದುಡ್ಡು ಕೊಟ್ಟೆ. ....?
>
> ಬಾಲಕ -ಅಣ್ಣಾ ನಾನು ಹುಡುಗ ದುಡಿಯುವ ಶಕ್ತಿ ಇದೆ ನಾನು ಹೇಗಾದರೂ ಮಾಡಿ ದುಡ್ಡು
> ಹೊಂದಿಸ್ತೀನಿ...   ಆದ್ರೆ ಪಾಪ ಆ ಅಜ್ಜಿಗೆ ಮೇಲೆಳೊಕು ಆಗಲ್ಲ ಅದ್ಕೆ ಕೊಟ್ಟೆ. ..
>
> ನಾನು ಆಶ್ಚರ್ಯಚಕಿತನಾದೆ. ಇಷ್ಟು ಚಿಕ್ಕ ವಯಸ್ಸಿಗೇ ಎಂತಹ ಬುದ್ದಿ ಬೇರೆಯವರಿಗೆ ಕಷ್ಟ
> ಕೊಟ್ಟು ನಾವು ಚೆನ್ನಾಗಿದ್ರೆ ಸಾಕು ಅನ್ನೊ ಈ ಜನರ ಮಧ್ಯೆ ನನಗೆ ಕಷ್ಟ ಇರಲಿ ಬೇರೆಯವರ
> ಕಷ್ಟಕ್ಕೆ ನಾನು ಸ್ಪಂದಸ್ತಿನಿ ಅನ್ನೋ  ಹುಡುಗನ ಮಾತು ಅವನ ಮೇಲಿನ ಅಭಿಮಾನವನ್ನು ಇನ್ನೂ
> ಜಾಸ್ತಿ ಮಾಡಿತು.
>
> ದುಃಖ ತಡೆಯದೆ ಅವನನ್ನು ಅಪ್ಪಿಕೊಂಡು ಅತ್ತು ಬಿಟ್ಟೆ  ಸಾವರಿಸಿಕೊಂಡು
>
> ನಾನು -ತಗೊ ಎಂದು 100 ರೂಪಾಯಿ
>
> ಬಾಲಕ -ಬೇಡ ಅಣ್ಣಾ ನಂಗೆ ಬರೀ 10 ರೂಪಾಯಿ ಸಾಕು ಎಂದು ಎಲ್ಲೋ ಒಂದು ಕಡೆ ಹೋಗಿ ಚಿಲ್ಲರೆ
> ತಂದು 90 ರೂಪಾಯಿ ನನ್ನ ಕೈಗಿತ್ತು ಬರ್ತಿನಿ ಅಂತ ಹೇಳಿ ಹೋಗುವಾಗ ಒಂದು ಮಾತು ಹೇಳಿದ
>
> ಅಣ್ಣಾ ನಾನು ಅಮ್ಮನನ್ನ  ಚೆನ್ನಾಗಿ ನೋಡ್ಕೊತೀನಿ ಭಿಕ್ಷೆ ಬೇಡಿ ಅಲ್ಲ ಚೆನ್ನಾಗಿ ದುಡ್ದು..
>
> ನಿಮ್ಮ ದುಡ್ಡನ್ನ ಖಂಡಿತ ವಾಪಸ್ ಕೊಡ್ತಿನಿ ಅಣ್ಣಾ ಎಂದವನ ಕಣ್ಣಲ್ಲಿ ಆತ್ಮವಿಶ್ವಾಸದ
> ಮಿಂಚೊಂದು ಕಣ್ಣಿಗೆ ರಾಚುವಂತೆ ಹೊಳೆಯುತ್ತಿತ್ತು. ..
>
> ಗೆಳೆಯರೆ ಇಂತಹ ಮುಗ್ಧ ಎಷ್ಟೋ ಮಕ್ಕಳು ನಮ್ಮ ನಿಮ್ಮ ಸುತ್ತಮುತ್ತ ಎಲ್ಲೆಡೆ ಇದ್ದಾರೆ
> ಅಂತಹವರಿಗೆ ನಮ್ಮಿಂದಾಗೋ  ಸಹಾಯ ಏನಾದರೂ ಮಾಡಲು ಸಾಧ್ಯನಾ.....? ಸಾಧ್ಯವಾದರೆ
> ಮುಂದುವರೆಯೋಣ..........ದಯಮಾಡಿ ಮನುಷತ್ವ ಬಿಡಬೇಡಿ
> 👍👍👍👍👍👍
> Forwarded as received....
>
>
> ಸ್ಯಾಮ್‌ಸಂಗ್ ಮೊಬೈಲ್ ನಿಂದ ಕಳುಹಿಸಿದೆ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>



-- 
HANUMEGOWDA
Lecturer
Ramapriya D.Ed. College
Mulabagilu
Kolar-563131
Mobile No. 8183972717

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to